Mysore
23
scattered clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಎಚ್‌ಡಿಡಿ ಇರುವಾಗಲೇ ಎಚ್‌ಡಿಕೆ ಸಿಎಂ ಆಗಬೇಕು: ಎಚ್.ಡಿ. ರೇವಣ್ಣ

‘ಉಚಿತ ವಿದ್ಯುತ್ ಘೋಷಣೆ’: 48 ಸಾ.ಕೋಟಿ ರೂ. ಸಾಲದಲ್ಲಿದೆ ಇಂಧನ ಇಲಾಖೆ

ಹಾಸನ:  ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ  ಬದುಕಿರುವಾಗಲೇ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ  ಹೇಳಿದರು.

ಈ ಬಗ್ಗೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ರಾಜ್ಯದಲ್ಲಿ ಪಂಚಯಾತ್ರೆ ಮಾಡುತ್ತಿದ್ದಾರೆ. ಹಾಸನದಲ್ಲಿ ಏಳಕ್ಕೆ ಏಳು ಕ್ಷೇತ್ರಗಳನ್ನು ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಹೇಳಿದ್ದೇನೆ. ಈ ಬಾರಿ ಜನತಾದಳ ಅಧಿಕಾರಕ್ಕೆ ಬರುತ್ತದೆ. ಅಧಿಕಾರಕ್ಕೆ ಬಂದರೆ ಶ್ರೀ ಶಕ್ತಿ ಸಾಲ ಮನ್ನಾ ಮಾಡುತ್ತೇವೆ. ಗೌಡರು ಬದುಕಿರುವಾಗಲೇ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕು, ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಕಾರ್ಯಕರ್ತರು ದುಡಿಯಬೇಕು ಎಂದರು.

ಕಾಂಗ್ರೆಸ್‌ನವರು ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿದ್ದಾರೆ. ಇಂಧನ ಇಲಾಖೆ ಈಗಾಗಲೇ 48 ಸಾವಿರ ಕೋಟಿ ರೂ. ಸಾಲದಲ್ಲಿದೆ. 200 ಯೂನಿಟ್ ಉಚಿತ ವಿದ್ಯುತ್ ಕೊಡೋದಕ್ಕೆ 9 ಸಾವಿರ ಕೋಟಿ ರೂ. ಬೇಕು. ರಾಜ್ಯದ ಜನತೆಗೆ ಈಗಾಗಲೇ ಬಿಜೆಪಿ, ಕಾಂಗ್ರೆಸ್ ಟೋಪಿ ಹಾಕಿವೆ. ಎಚ್.ಡಿ.ಕುಮಾರಸ್ವಾಮಿ ಸರ್ಕಾರ ರೈತರ ಸಾಲಮನ್ನಾ ಮಾಡಿದೆ. ಇನ್ನು ಕುಮಾರಸ್ವಾಮಿ ಅವಧಿಯಲ್ಲಿ ಹಾಸನ ಜಿಲ್ಲೆಗೆ ನೀಡಿದ್ದ ಯೋಜನೆಗಳನ್ನು ತಡೆ ಹಿಡಿದಿದ್ದಾರೆ. ವಿಮಾನ ನಿಲ್ದಾಣ, ಐಐಟಿ, ತೋಟಗಾರಿಕೆ ಕಾಲೇಜು ಸ್ಥಾಪಿಸುವುದನ್ನು ತಡೆ ಹಿಡಿದಿದ್ದಾರೆ. ತಾಂತ್ರಿಕ ವಿಶ್ವವಿದ್ಯಾಲಯವನ್ನೂ ತಡೆ ಹಿಡಿದಿದ್ದಾರೆ. ಐಐಟಿ, ಟೆಕ್ನಿಕಲ್ ಯೂನಿವರ್ಸಿಟಿಗೆ ಜಾಗ ಮೀಸಲಿಟ್ಟಿದ್ದೆವು, ದುರುದ್ದೇಶದಿಂದ ನಮ್ಮ ಯೋಜನೆಗಳನ್ನು ನಿಲ್ಲಿಸಿದ್ದಾರೆ ಎಂದರು.
ಅಂಗನವಾಡಿ  ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೂ ಸೌಲಭ್ಯ ದ್ವಿಗುಣ ಮಾಡುತ್ತೇವೆ. ಓಪಿಎಸ್ ಯೋಜನೆಯನ್ನು ವಿಧಾನಸಭೆಯಲ್ಲಿ ಚರ್ಚಿಸುತ್ತೇವೆ. ಓಪಿಎಸ್ ಬಗ್ಗೆ ದೇವೇಗೌಡರು ಒಲವು ತೋರಿದ್ದಾರೆ, ಈ ಕುರಿತು ನಾವು ದೇವೇಗೌಡರ ಜೊತೆ ನಿಲ್ಲುತ್ತೇವೆ ಎಂದರು.
ಕಾಂಗ್ರೆಸ್ ನಾಯಕರ ಪ್ರಜಾಧ್ವನಿ ಯಾತ್ರೆ ಕುರಿತು ಮಾತನಾಡಿ, ಆ ಧ್ವನಿ ಯಾರಿಗೂ ಮುಟ್ಟುತ್ತಿಲ್ಲ. ದಿಲ್ಲಿಗೇ ಮುಟ್ಟಿಲ್ಲ, ಇನ್ನು ಕರ್ನಾಟಕಕ್ಕೆ ಮುಟ್ಟುತ್ತಾ ಎಂದು ವ್ಯಂಗ್ಯವಾಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!