Mysore
21
overcast clouds

Social Media

ಶನಿವಾರ, 15 ಆಗಸ್ಟ್ 2026
Light
Dark

ಮೈಸೂರು : ಮನುಸ್ಮೃತಿಗೆ ಬೆಂಕಿ ಹಚ್ಚಿ ದಸಂಸ ಕಾರ್ಯಕರ್ತರ ಪ್ರತಿಭಟನೆ

ಮೈಸೂರು: ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿವತಿಯಿಂದ ವಿವಿಧ ದಲಿತ ಸಂಘಟನೆಗಳ ಮುಖ್ಯಸ್ಥರು ಮನು ಸ್ಮೃತಿ ಪುಟಗಳಿಗೆ ಬೆಂಕಿ ಹಚ್ಚುವ ಮೂಲಕ ‘ಸಂವಿಧಾನವನ್ನು ಎದೆಗಪ್ಪಿಕೊಳ್ಳೋಣ’ ಎಂಬ ಕಾರ್ಯಕ್ರಮವನ್ನು ನಡೆಸಿದರು.


ಭಾನುವಾರ ಬೆಳಿಗ್ಗೆ ಪುರಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಜಮಾವಣೆಗೊಂಡ ದಸಂಸ ಕಾರ್ಯಕರ್ತರು, ಮನುಸ್ಮೃತಿಯ ಅಣತಿಯಂತೆ ಒಂದು ವರ್ಗದ ಜನರು ದೇಶವನ್ನು ಒಡೆದು ಆಳುವ ಮೂಲಕ ದಲಿತರ ಶೋಷಣೆ ನಡೆಸಿದ್ದಾರೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು.


ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ, ಶಂಭುಲಿಂಗ ಸ್ವಾಮಿ, ಆಲಗೂಡು ಶಿವಕುಮಾರ್, ಚುಂಚನಹಳ್ಳಿ ಮಲ್ಲೇಶ್, ಭುಗತಹಳ್ಳಿ ಮಣಿಯಯ್ಯ, ಕಾರ್ಯ ಬಸವಣ್ಣ, ಜಗದೀಶ್ ಪಿರಿಯಾಪಟ್ಟಣ, ಜಗದೀಶ್, ಶಿವಬುದ್ದಿ, ಪುಟ್ಟಸ್ವಾಮಿ, ಕಲ್ಲಹಳ್ಳಿ ಕುಮಾರ್, ನಾರಾಯಣ್, ವರದಯ್ಯ, ಬಾಲಾಜಿ, ಮಂಜು ಶಂಕರಪುರ, ರಾಮಕೃಷ್ಣ, ಮಹೇಶ್, ಕೊತ್ತೇಗಾಲ ಸೋಮಣ್ಣ, ಶಿವಲಿಂಗಯ್ಯ, ಗಟ್ಟವಾಡಿ ಮಹೇಶ್, ಅಪ್ಸರ್, ನಾಗರಾಜು ಮುಂತಾದವರು ಭಾಗವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!