ಹನೂರು : ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಪಲ್ಟಿ ಯಾಗಿರುವ ಘಟನೆ ತಾಲೂಕಿನ ಕೌದಳ್ಳಿ ಸಮೀಪ ಜರುಗಿದೆ.
ತಮಿಳುನಾಡಿನಿಂದ ಸಿಮೆಂಟ್ ತುಂಬಿಕೊಂಡು ಮಂಡ್ಯಕ್ಕೆ ಬರುತ್ತಿದ್ದ ವೇಳೆ ಕೌದಳ್ಳಿ ಸಮೀಪದ ಸತ್ತರ್ ಮೇಡು ಗ್ರಾಮದ ಬಳಿ ಕೆರೆಗೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಕೆರೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ಸಿಮೆಂಟ್ ತುಂಬಿದ ಲಾರಿಗೆ ನೀರು ತುಂಬಿಕೊಂಡು ಸಿಮೆಂಟ್ ನೀರು ಪಾಲಾಗಿ ಲಕ್ಷಾಂತರ ರೂ ನಷ್ಟವಾಗಿದೆ. ಈ ಸಂಬಂಧ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.