ಹನೂರು : ಪಟ್ಟಣಕ್ಕೆ ಇದೇ 13 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದ್ದು ಕವನದ ಮೂಲಕ ಮೂಲಸೌಕರ್ಯ ಕಲ್ಪಿಸುವಂತೆ ಗ್ರಾಪಂ ಸದಸ್ಯ ನಾಗೇಂದ್ರ ಮನವಿ ಮಾಡಿಕೊಂಡ ಘಟನೆ ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.
ಮಹದೇಶ್ವರ ಬೆಟ್ಟದ ಒಂದನೇ ವಾರ್ಡ್ ನ ಗ್ರಾಪಂ ಸದಸ್ಯ ನಾಗೇಂದ್ರ ಎಂಬವರು ಕವನದ ಮೂಲಕ ಸಿಎಂಗೆ ಸ್ವಾಗತ ಕೋರಿ ಮೂಲ ಸೌಕರ್ಯ ಕೊಡುವಂತೆ ಒತ್ತಾಯಿಸಿದ್ದಾರೆ. ಜೊತೆಗೆ, ಸೌಲಭ್ಯ ಕಲ್ಪಿಸಿದರಷ್ಟೇ ಮತ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಹುಲಿಯೋಜನೆ ಜಾರಿಯಾಗಬಾರದು, ಆಸ್ಪತ್ರೆ- ವಿದ್ಯುತ್, ರಸ್ತೆ, ಶಿಕ್ಷಣದ ಸೌಲಭ್ಯ ದೊರಕಿಸಿಕೊಡಿ ಎಂದು ಪ್ರಾಸ ಪದಗಳ ಮೂಲಕ ಕೇಳಿಕೊಂಡಿದ್ದಾರೆ.
ಇನ್ನು, ಕವನ ವಾಚಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕವಿಯ ಒತ್ತಾಯವನ್ನು ಸಿಎಂ ಗಮನಿಸುವರೇ ಎಂದು ಕಾದು ನೋಡಬೇಕಿದೆ.





