Mysore
21
overcast clouds

Social Media

ಶನಿವಾರ, 15 ಆಗಸ್ಟ್ 2026
Light
Dark

ಮದ್ದೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ : ಕಳುವಾಗಿದ್ದ 34 ದ್ವಿಚಕ್ರಗಳ ವಾಹನಗಳ ವಶ

ಮಂಡ್ಯ : ಮದ್ದೂರು ಅಂತರ್ ರಾಜ್ಯಗಳಲ್ಲಿ ಆರೋಪಿ ಬಂಧನ ಸುಮಾರು 16 ಲಕ್ಷ 40,000 ಬೆಲೆ ಬಾಳುವ ವಿವಿಧ ಮಾದರಿಯ 34 ದ್ವಿಚಕ್ರಗಳ ವಾಹನಗಳ ಹೊಸ ಪಡಿಸಿಕೊಳ್ಳುವಲ್ಲಿ ಮದ್ದೂರು ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಅಪಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವೇಣುಗೋಪಾಲ್ ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ 34 ದ್ವಿಚಕ್ರ ವಾಹನಗಳ ವಶಪಡಿಸಿಕೊಂಡಿರುವುದನ್ನು ಪರಿಶೀಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.

ಅಪಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ ಆರೋಪಿ ರಾಜೇಶ್ ಎಸ್ ಕುಳ್ಳಾಬಿನ್ ಸಿದ್ದಪ್ಪಾಜಿ 32 ವರ್ಷ ಈತ ವಡ್ಡರಪಾಳ್ಯ ಗ್ರಾಮದವನು ಚಾಮರಾಜನಗರ ಜಿಲ್ಲೆಯ ಈತನು ಮೈಸೂರು ಜಿಲ್ಲೆ, ಮಂಡ್ಯ ಜಿಲ್ಲೆ ಚಾಮರಾಜನಗರ ಜಿಲ್ಲಾ ಹಾಗೂ ತಮಿಳು ಗಡಿ ಭಾಗದ ಗ್ರಾಮಗಳಲ್ಲಿ ಬೈಕ್ಗಳನ್ನ ಕಳ್ಳತನ ಮಾಡಿ ಸಿಕ್ಕಷ್ಟು ಹಣಕ್ಕೆ ಮಾರಾಟ ಮಾಡಿ ಓಡಾಡುತ್ತಿದ್ದನು.

ಮದ್ದೂರು ಪಟ್ಟಣದ ಬಸ್ ನಿಲ್ದಾಣದ ಹೆದ್ದಾರಿಯಲ್ಲಿ ನಾಮಫಲಕ ಇಲ್ಲದ ಬೈಕಿನ ಮೇಲೆ ಕುಳಿತಿದ್ದು ಗಸ್ತಿನಲ್ಲಿದ್ದ ನಮ್ಮ ಪೊಲೀಸರು ಅನುಮಾನ ದಿಂದ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾನು ಬೈಕುಗಳನ್ನ ಕದ್ದಿ ಮಾರಾಟ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು ಆ ಮೋಟರ್ ಸೈಕಲ್ ಗಳನ್ನ ವಿವಿಧ ಪೊಲೀಸ್ ಠಾಣೆ ಸರತಿನಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದು.

ಆ ಬೈಕುಗಳನ್ನ ವಶಪಡಿಸಿಕೊಂಡು ಅದರ ವೆಚ್ಚ ಸುಮಾರು 16 ಲಕ್ಷ 40,000 ಬೆಲೆಬಾಳುವ 34 ಮೋಟರ್ ಸೈಕಲ್ ಆಗಿದ್ದು ಅವುಗಳನ್ನು ಅಮಾನತ್ತು ಪಡಿಸಿಕೊಂಡಿದ್ದು ಸಂಬಂಧಪಟ್ಟ ಮಾಲೀಕರುಗಳಿಗೆ ವಿಚಾರ ತಿಳಿಸಲಾಗಿದೆ ಎಂದರು.

ಮಳವಳ್ಳಿ ಉಪ್ಪ ವಿಭಾಗದ ಪೊಲೀಸ್ ಉಪಾಧ್ಯಕ್ಷರಾದ ನವೀನ್ ಕುಮಾರ್ ಮಾರ್ಗದರ್ಶನದ ಮೇರೆಗೆ ಪಟ್ಟಣದ ಸಿಪಿಐ ಸಂತೋಷ್ ಪಿಎಸ್ಐಗಳಾದ ನರೇಶ್ ಕುಮಾರ್ ಉಮೇಶ್ ರವಿ. ಪೋಲಿಸ್ ಗಳಾದ ಗಿರೀಶ್ ಗುರುಪ್ರಸಾದ್ ಪರಮಾನಂದ ಈ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು ಸ್ ಪ್ರಶಂತಿಸಿದ್ದಾರೆ.

ಮುಂದಿನ ದಿನಗಳಲ್ಲಿ ಇವರಿಗೆ ಕರ್ತವ್ಯ ನಿಷ್ಠೆ ಹಾಗೂ ಕಳ್ಳತನ ಬೇಧಿಸುವಲ್ಲಿ ಯಶಸ್ವಿಯಾಗಿ ಸನ್ಮಾನ ಹಾಗೂ ಪ್ರಶಸ್ತಿಗಳನ್ನು ನೀಡಲು ಶಿಫಾರಸು ಮಾಡಲಾಗುತ್ತದೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!