Mysore
24
overcast clouds

Social Media

ಬುಧವಾರ, 17 ಜೂನ್ 2026
Light
Dark

ಗ್ರಾ.ಪಂಯಲ್ಲಿ ಸಕಾಲಕ್ಕೆ ಬಾರದ ಸಿಬ್ಬಂದಿ: ಸ್ಥಳೀಯರ ಆರೋಪ

ಗುಂಡ್ಲುಪೇಟೆ: ತಾಲ್ಲೂಕಿನ ಕೆಲವು ಗ್ರಾ.ಪಂ. ಗಳಲ್ಲಿ ಬೆಳಿಗ್ಗೆ ೧೧ ಗಂಟೆ ಆದರೂ ಪಿಡಿಒಗಳು, ಕೆಲವು ಸಿಬ್ಬಂದಿ ಬರುವುದೇ ಇಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಗ್ರಾ.ಪಂ. ಗಳಲ್ಲಿ ಸರಿಯಾದ ಸಮಯಕ್ಕೆ ಪಿಡಿಒಗಳು ಬರುತ್ತಿಲ್ಲ. ಇದರಿಂದ ಕೆಲಸ ಕಾರ್ಯಗಳು ಕುಂಠಿತಗೊಳ್ಳುತ್ತಿವೆ. ಸಾರ್ವಜನಿಕರು ಹೇಳಿದ ಕೆಲಸ ಸರಿಯಾದ ಸಮಯಕ್ಕೆ ಮಾಡದೆ ಅಲೆದಾಡಿಸುತ್ತಿದ್ದಾರೆ. ಕೆಲವು ಪಿಡಿಓಗಳು ಸಾರ್ವಜನಿಕರು ಕರೆ ವಾಡಿದರೆ ಸ್ವೀಕರಿಸುವುದಿಲ್ಲ. ಇತ್ತ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗೆ ತಿಳಿಸಿದರೂ ಪಿಡಿಓಗಳ ಮೇಲೆ ಹಿಡಿತ ಹೊಂದಿಲ್ಲ ಎಂದು ಸಾರ್ವಜನಿಕರಾದ ಅವಿನಾಶ್ ಮತ್ತು ಮಾಡ್ರಹಳ್ಳಿ ನವೀನ್ ಆರೋಪಿಸಿದ್ದಾರೆ.
ನೇನೆಕಟ್ಟೆ ಗ್ರಾ.ಪಂ.ನಲ್ಲಿ ಬೆಳಿಗ್ಗೆ ೧೧ ಗಂಟೆಯಾದರೂ ಪಿಡಿಓ ಬರುವುದಿಲ್ಲ. ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಇಓ ಗಮನಹರಿಸಬೇಕು ಎಂದು ಮಾಡ್ರಹಳ್ಳಿ ಗ್ರಾಮಸ್ಥ ನವೀನ್ ಒತ್ತಾಯಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!