Mysore
23
overcast clouds

Social Media

ಶನಿವಾರ, 15 ಆಗಸ್ಟ್ 2026
Light
Dark

ಕರಾಮುವಿ: ನವೀಕರಣ ಶುಲ್ಕ ಪಾವತಿಸಲು ಅರ್ಜಿ ಆಹ್ವಾನ

ಚಾಮರಾಜನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ೨೦೧೪-೧೫ರಲ್ಲಿ ಯುಜಿ ಕೋರ್ಸುಗಳಿಗೆ ಹಾಗೂ ೨೦೧೮-೧೯ರ ಜುಲೈ, ೨೦೧೯-೨೦ ಮತ್ತು ೨೦೨೦-೨೧ ಜುಲೈ ಆವೃತ್ತಿಗಳಲ್ಲಿ ಪ್ರವೇಶ ಪಡೆದಿದ್ದ ಬಿ.ಎ, ಬಿಕಾಂ, ಬಿಎಸ್ಸಿ (ಜನರಲ್, ಹೋಮ್ ಸೈನ್ಸ್, ಐಟಿ), ಬಿಸಿಎ, ಬಿಬಿಎ ಹಾಗೂ ಎಂ.ಎ, ಎಂಕಾಂ, ಎಂಎಸ್ಸಿ, ಎಂಬಿಎ ಪದವಿಗಳಿಗೆ ಪ್ರವೇಶಾತಿ ಪಡೆದಿದ್ದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನವೀಕರಣ ಶುಲ್ಕ ಪಾವತಿಸಲು ಅರ್ಜಿ ಆಹ್ವಾನಿಸಲಾಗಿದೆ.
ದಂಡ ಶುಲ್ಕವಿಲ್ಲದೆ ಶುಲ್ಕ ಪಾವತಿಸಲು ಡಿಸೆಂಬರ್ ೯ ಹಾಗೂ ೨೦೦ ರೂ. ದಂಡ ಶುಲ್ಕದೊಡನೆ ಶುಲ್ಕ ಪಾವತಿಸಲು ಡಿ.೧೫ ಮತ್ತು ೪೦೦ ರೂ. ದಂಡ ಶುಲ್ಕದೊಂದಿಗೆ ಶುಲ್ಕ ಪಾವತಿಸಲು ಡಿ.೨೬ ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಕೇಂದ್ರ ಕಚೇರಿ ಅಥವಾ ಕೇಂದ್ರ ಕಚೇರಿಯ ೯೯೮೬೫೬೪೯೧೩, ೯೯೪೫೨೪೪೨೭೪, ೮೪೫೩೧೧೪೪೧೯ ಸಂಪರ್ಕಿಸುವಂತೆ ಪ್ರಾದೇಶಿಕ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!