ಮೈಸೂರು: ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಾರಂಜಿ ಕೆರೆ ಆವರಣ ಪ್ರವೇಶಕ್ಕೆ ಮತ್ತೊಂದು ದ್ವಾರವನ್ನು ತೆರೆಯಲಾಗಿದೆ.
ನಗರದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಕಾರಂಜಿಕೆರೆಯೂ ಒಂದು. ಕಾರಂಜಿ ಕೆರೆ ನಿರ್ವಹಣೆಯನ್ನು ಮೃಗಾಲಯ ಪ್ರಾಧಿಕಾರ ವಾಡುತ್ತಿದೆ. ನಗರದ ಎಂ.ಜಿ.ರಸ್ತೆಯಲ್ಲಿ ಮುಖ್ಯ ದ್ವಾರವಿದೆ. ಪ್ರತಿದಿನ ಸಾವಿರಾರು ಮಂದಿ ಕಾರಂಜಿ ಕೆರೆಗೆ ಭೇಟಿ ನೀಡುತ್ತಾರೆ. ದೋಣಿ ವಿಹಾರ ಇರುವ ಕಾರಣ ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸಿಗರಿಗೆ ಹೆಚ್ಚು ಆಕರ್ಷಣೀಯವಾಗಿದೆ. ಆದರೆ, ಮುಖ್ಯ ದ್ವಾರದಲ್ಲಿ ಜನಸಂದಣಿ ಹೆಚ್ಚಾದ ಕಾರಣ ಮತ್ತೊಂದು ದ್ವಾರದ ಮೂಲಕ ಪ್ರವೇಶ ನೀಡಲು ಚಿಂತನೆ ನಡೆಸಲಾಗಿತ್ತು.
ನಗರದ ಮೈಸೂರು-ತಿ.ನರಸೀಪುರ ಮುಖ್ಯರಸ್ತೆುಂಲ್ಲಿನ ನಂದಿನ ಹಾಲಿನ ಕೇಂದ್ರದ ಎದುರಿರುವ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ಸಂಗ್ರಹಾಲುಂದ ಕಚೇರಿ ಆವರಣಕ್ಕೆ ಹೊಂದಿಕೊಂಡಂತೆ ನೂತನವಾಗಿ ಪ್ರವೇಶ ದ್ವಾರವನ್ನು ಆರಂಭಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಮೃಗಾಲುಂ ಪ್ರಾಧಿಕಾರದ ಅಧ್ಯಕ್ಷ ಶಿವಕುವಾರ್ ಅವರು ನೂತನ ಪ್ರವೇಶ ದ್ವಾರವನ್ನು ಉದ್ಘಾಟಿಸಿದರು. ಕರ್ನಾಟಕ ಮೃಗಾಲುಂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಜ್ಯೋತಿ ರೇಚಣ್ಣ, ಗೋಕುಲ್ ಗೋವರ್ಧನ್, ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಮತ್ತಿತರರು ಹಾಜರಿದ್ದರು.





