Mysore
24
overcast clouds

Social Media

ಗುರುವಾರ, 18 ಜೂನ್ 2026
Light
Dark

ಅರಣ್ಯ ಇಲಾಖೆಗೆ ಚಳ್ಳೆ ಹಣ್ಣು ತಿನಿಸುತ್ತಿರುವ ಚಿರತೆ

ಮಂಡ್ಯ: ಪ್ರಸಿದ್ಧ ಪ್ರವಾಸಿ ತಾಣ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜ ಸಾಗರದ ಬೃಂದಾವನದಲ್ಲಿ ಕಾಣಿಸಿಕೊಂಡ ಚಿರತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನಿಸುತ್ತಿದೆ.

ಚಿರತೆಯು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರು ಬೃಂದಾವನಕ್ಕೆ ಬಾರದಂತೆ ಎರಡು ದಿನಗಳು ಪ್ರವೇಶ ನಿಷೇಧಿಸಿ, ಇದನ್ನು ಸೆರೆ ಹಿಡಿಯಲು ಉತ್ತರ ಬೃಂದಾವನದಲ್ಲಿ ಒಂದು ಬೋನು ಹಾಗೂ ದಕ್ಷಿಣ ಬೃಂದಾವನದಲ್ಲಿ ಎರಡು ಬೋನ್‌ಗಳನ್ನು ಕಳೆದ ಒಂದು ವಾರದ ಹಿಂದೆಯೇ ಇಡಲಾಗಿದೆ.
ಆದರೆ, ಈ ಚಾಣಾಕ್ಷ ಚಿರತೆಯು ಬೋನಿಗೆ ಬೀಳದೆ ಆಗಾಗ್ಗೆ ಬೃಂದಾವನದಲ್ಲಿ ಕಾಣಿಸಿಕೊಂಡು ಪ್ರವಾಸಿಗರಿಗೆ ಭುಂಭೀತಿ ಹುಟ್ಟಿಸುತ್ತಿರುವುದಲ್ಲದೆ, ಅರಣ್ಯ ಇಲಾಖೆಯವರಿಗೂ ಚಳ್ಳೆ ಹಣ್ಣು ತಿನಿಸುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!