Mysore
27
overcast clouds

Social Media

ಗುರುವಾರ, 30 ಜುಲೈ 2026
Light
Dark

ಬೊಂಬೆಗಳ ಪ್ರದರ್ಶನ : ಅರಮನೆ ಮಂಡಳಿ ವತಿಯಿಂದ ಪ್ರಶಂಸನಾ ಪತ್ರ ವಿತರಣೆ

ಮೈಸೂರು : ಮೈಸೂರು ದಸರಾ ಮಹೋತ್ಸವ 2022ರ ಸಂದರ್ಭದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಮೈಸೂರು ಅರಮನೆ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಬೊಂಬೆಗಳ ಪ್ರದರ್ಶನವನ್ನು ನಡೆಸಿಕೊಟ್ಟಂತಹ

ಭಾನು ಪ್ರಕಾಶ್‌ ಶರ್ಮಾ – ಸಾಂಪ್ರದಾಯಿಕ ಬೊಂಬೆ ಪ್ರದರ್ಶನ
ಗೀತಾ ಶ್ರೀಹರಿ – ನರಸಿಂಹ ಅವತಾರ 
ನಾಗ ಪ್ರಸಾದ್‌ – 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ 
ಹೇಮಲತಾ ಕುಮಾರಸ್ವಾಮಿ – ಶ್ರೀ ದೇವಿ ದಿವ್ಯ ದರ್ಶನ
ಮೀರಾ ರಮೇಶ್‌ – ಅರಮನೆಯಲ್ಲಿ ದುರ್ಗಾ ಪೂಜೆ 
ಅನ್ನಪೂರ್ಣ ಗೋಪಾಲಕೃಷ್ಣ – ವಿಷ್ಣು ಲೀಲೆ 
ಲೀಲಾವತಿ – ಮಾನವನ ಜೀವನ ಚಕ್ರ

ಇವರುಗಳಿಗೆ ಅರಮನೆ ಮಂಡಳಿ ವತಿಯಿಂದ ಪ್ರಶಂಸನಾ ಪತ್ರಗಳನ್ನು ಉಪನಿರ್ದೇಶಕರಾದ ಟಿ ಎಸ್‌ ಸುಬ್ರಮಣ್ಯ ಅವರು ಗೌರವಿಸಿದರು. ಈ ಸಂದರ್ಭದಲ್ಲಿ ಅರಮನೆ ಮಂಡಳಿಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
10 ದಿನಗಳ ಕಾಲ ನಡೆದ ಬೊಂಬೆಗಳ ಪ್ರದರ್ಶನವನ್ನು  ಸುಮಾರು 2 ಲಕ್ಷಕ್ಕೂಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ..

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!