Mysore
34
few clouds

Social Media

ಸೋಮವಾರ, 13 ಏಪ್ರಿಲ 2026
Light
Dark

ಸಿಎಂಗೆ ನೋಟಿಸ್‌ ನೀಡಿದಂತೆ ಎಚ್‌ಡಿಕೆ ಅವರಿಗೆ ಯಾಕೆ ನೋಟಿಸ್ ನೀಡಿಲ್ಲ: ಸಂತೋಷ್‌ ಲಾಡ್‌

ಬೆಂಗಳೂರು: ಮುಡಾ ಪ್ರಕರಣದಲ್ಲಿ ಇಡಿ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್‌ ನೀಡಿದಂತೆ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಯಾಕೆ ನೋಟಿಸ್‌ ನೀಡಿಲ್ಲ ಎಂದು ಸಚಿವ ಸಂತೋಷ್‌ ಲಾಡ್‌ ಪ್ರಶ್ನಿಸಿದರು.

ನಗರದಲ್ಲಿ ಇಂದು(ಅಕ್ಟೋಬರ್‌.16) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಇ.ಡಿ. ನೋಟಿಸ್‌ ನೀಡಿದರ ಹಿಂದಿನ ಲಾಜಿಕ್‌ ಅರ್ಥವಾಗಿಲ್ಲ. ಸಿಎಂ ಅವರಂತೆಯೇ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಜಮೀನು ಡಿನೋಟಿಕೇಷನ್‌ ಆರೋಪದಲ್ಲಿ ತನಿಕೆ ಎದುರಿಸುತ್ತಿದ್ದಾರೆ. ಹೀಗಿದ್ದರೂ ಎಚ್‌ಡಿಕೆ ಅವರಿಗೆ ಯಾಕೆ ಇ.ಡಿ. ನೋಟಿಸ್‌ ನೀಡಿಲ್ಲ. ಇದರ ಬಗ್ಗೆ ಇ.ಡಿ.ಯೇ ರಾಜ್ಯದ ಜನತೆಗೆ ಅರ್ಥವಾಗುವಂತೆ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.

Tags:
error: Content is protected !!