Mysore
33
few clouds

Social Media

ಸೋಮವಾರ, 13 ಏಪ್ರಿಲ 2026
Light
Dark

ಸಿಎಂ ಭೇಟಿ ಬಳಿಕ ಮೃತ ರೇಣುಕಾಸ್ವಾಮಿ ತಂದೆ ಹೇಳಿದ್ದೇನು ?

ಬೆಂಗಳೂರು : ಮೃತ ರೇಣುಕಾಸ್ವಾಮಿ ಅವರ ಪೋಷಕರು ಸಿಎಂ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಭೇಟಿ ಮಾಡಿದರು.

ನಟ ದರ್ಶನ್‌ ಹಾಗೂ ಸಂಗಡಿಗರಿಂದ ಕೊಲೆ ಪ್ರಕರಣದಲ್ಲಿ ಮೃತನಾದ ರೇಣುಕಾಸ್ವಾಮಿ ಅವರ ತಂದೆ-ತಾಯಿ ಇಂದು ಬೆಂಗಳೂರಿನ ಸಿಎಂ ಗೃಹ ಕಚೇರಿ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ರೇಣುಕಾಸ್ವಾಮಿ ಅವರ ಪೋಷಕರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಸಿಎಂ ಬೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರೇನುಕಾಸ್ವಾಮಿ ತಂದೆ, ಮುಖ್ಯಮಂತ್ರಿಗಳು ನಮಗೆ ಧೈರ್ಯ ನೀಡಿದ್ದಾರೆ.  ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ನಮ್ಮ ಸೊಸಯ ಜಿವನೋಪಾಯದ ದೃಷ್ಠಿಯಿಂದ ಒಂದು ಖಾಯಂ ಸರ್ಕಾರಿ ನೌಕರಿ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ಸಂಬಂಧಪಟ್ಟ ದಾಖಲೆಗಳನ್ನು ನೀಡಿ, ಅದರ ಆಧಾರದ ಮೇಲೆ ನಮ್ಮ ಸೊಸೆಗೆ ಕೆಲಸ ನೀಡುವುದಾಗಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿಸಿದರು.

 

Tags:
error: Content is protected !!