Mysore
29
scattered clouds

Social Media

ಬುಧವಾರ, 18 ಮಾರ್ಚ್ 2026
Light
Dark

ಕ್ಷಣ ಕ್ಷಣಕ್ಕೂ ಕಾವೇರುತ್ತಿರುವ ಮಂಡ್ಯ ಅಖಾಡ; ಸುಮಲತಾ-ಎಚ್‌ಡಿಕೆ ಭೇಟಿಗೆ ಡಿಕೆಶಿ ಟೀಕೆ

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಗುಟ್ಟು ಬಿಟ್ಟು ಕೊಡದೆ ಇರುವುದರಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಅಖಾಡ ಮತ್ತಷ್ಟು ರಂಗೇರಿದೆ. ಈ ಮಧ್ಯ ಸುಮಲತಾ ಮನವೊಲಿಕೆಗೆ ಖುದ್ದು ಮೈತ್ರಿ ಅಭ್ಯರ್ಥಿ ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ. ನಾಮಪತ್ರ ಸಲ್ಲಿಕೆಗೆ 4 ದಿನಗಳು ಬಾಕಿ ಇದೆ. ಏಪ್ರಿಲ್‌ 3ಕ್ಕೆ ನಿರ್ಧಾರ ತಿಳಿಸುವುದಾಗಿ ಸುಮಲತಾ ಹೇಳಿರುವುದು ಮಂಡ್ಯ ಅಖಾಡಕ್ಕೆ ಹೊಸ ಆಯಾಮ ಕೊಟ್ಟಿದೆ.

ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಭಾನುವಾರ ಸುಮಲತಾರನ್ನು ಭೇಟಿಯಾಗಿದ್ದು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಏಪ್ರಿಲ್‌.4 ರಂದು ನಾಮಪತ್ರ ಸಲ್ಲಿಸುತ್ತೀದ್ದೇನೆ. ಸಹಕಾರ ಕೊಡಿ ಅಂತಾ ಮನವಿ ಮಾಡಿದ್ದಾರೆ. ಜೊತೆಗೆ ಸುಮಲತಾ ನಾನು ನನ್ನ ವೈರಿ ಅಲ್ಲ ಎಂದೂ ಹೇಳಿದ್ದಾರೆ.

ನಾನೇನು ವೈರಿನಾ, ವಿಷ ಹಾಕಿದ್ನಾ? ಡಿಕೆಶಿ ತಿರುಗೇಟು.
ಸುಮಲತಾ ನನ್ನ ವೈರಿ ಅಲ್ಲ ಎಂಬ ಎಚ್‌ಡಿಕೆ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್‌ ಕಿಡಿ ಕಾರಿದ್ದಾರೆ. ನಾನೇನು ವೈರಿಯಾ, ವಿಷ ಹಾಕಿದ್ನ ಎಂದು ತಿರುಗೇಟು ನೀಡಿದ್ದಾರೆ.

ಡಿಕೆ ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಡಿಕೆಯಷ್ಟು ಹಿತೈಷಿ ಯಾರು ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಸುಮಲತಾ ಕೂಡ ನಾವೇನಾದರೂ ವಿಷ ಹಾಕಿದ್ದೆವಾ ಎಂದು ಡಿಕೆಶಿ ಹೇಳಿಕೆಗೆ ಅಸಮಾಧಾನ ಹೊರಹಾಕಿದ್ದಾರೆ.

ಈ ಮಧ್ಯೆ ಅಂಬರೀಶ್‌ ಕಾಂಗ್ರೆಸ್‌ ಪಕ್ಷಕ್ಕೆ ಏನು ಅನ್ಯಾಯ ಮಾಡಿದ್ದರು? ಕಾಂಗ್ರೆಸ್‌ನಲ್ಲಿ ನಮ್ಮ ಕುಟುಂಬ 25 ವರ್ಷ ಸೇವೆ ಸಲ್ಲಿಸಿದೆ. ಈ 5 ವರ್ಷದಲ್ಲಿ ಕಾಂಗ್ರೆಸ್‌ ನಾಯಕರಿಗೆ ಅದು ನೆನಪಾಗಲಿಲ್ಲವಾ ಎಂದು ಡಿಕೆಶಿಗೆ ಸಂಸದೆ ಸುಮಲತಾ ಪ್ರಶ್ನೆ ಮಾಡಿದ್ದಾರೆ.

ಒಟ್ಟಿನಲ್ಲಿ ಮಂಡ್ಯ ಅಖಾಡದಲ್ಲಿ ವಿಷದ ವಿಚಾರ ಭಾರಿ ಸದ್ದು ಮಾಡುತ್ತಿದೆ. ಸಂಸದೆ ಸುಮಲತಾ ಅಂಬರೀಶ್‌ನ ಮುಂದಿನ ನಡೆ ಏನು ಎಂಬುದ ಕುತೂಹಲದ ವಿಷಯವಾಗಿದೆ.

Tags:
error: Content is protected !!