ಬೆಂಗಳೂರು: ಅಮೇರಿಕಾ ವೀಸಾ ಪಡೆಯಲು ಬೆಂಗಳೂರಿನಲ್ಲಿ ಅಮೇರಿಕಾದ ದೂತವಾಸ(ಕಾನ್ಸಲೇಟ್) ಕಚೇರಿ ಸ್ಥಾಪಿಸಬೇಕೆಂಬ ಬೆಂಗಳೂರಿಗರ ಬಹುಕಾಲದ ಬೇಡಿಕೆಯು ಇದೇ ತಿಂಗಳ 17ರಂದು ನನಸಾಗಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಈ ಬಗ್ಗೆ ʼಎಕ್ಸ್ʼ ನಲ್ಲಿ ಪೋಸ್ಟ್ ಮಾಡಿರುವ ಅವರು, ನನ್ನ ಪ್ರೀತಿಯ ಬೆಂಗಳೂರಿಗರೇ ಇದೀಗ ಜ.17ರಂದು ಅಮೇರಿಕ ಕಾನ್ಸುಲೇಟ್ ತೆರೆಯಲಾಗುತ್ತಿದೆ. ಇದನ್ನು ಸಾಧ್ಯವಾಗಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಸಂಬಂಧ ವಿದೇಶಾಂಗ ಸಚಿವ ಜೈ ಶಂಕರ್ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿ ಅವರ ಜೊತೆ ಇರುವ ವಿಡಿಯೊವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಮೇರಿಕ ವೀಸಾ ಪಡೆಯಲು ಬೆಂಗಳೂರಿನಲ್ಲಿ ಅಮೇರಿಕಾ ದೂತವಾಸ ಕಚೇರಿ ಸ್ಥಾಪಿಸುವುದು ಬಹುಕಾಲದ ಬೇಡಿಕೆಯಾಗಿತ್ತು. ಇಲ್ಲಿವರೆಗೆ ಜನರು ಅಮೇರಿಕಾ ವೀಸಕ್ಕಾಗಿ ಚೆನ್ನೈ ಅಥವಾ ಹೈದರಾಬಾದ್ಗೆ ತೆರಳುತ್ತಿದ್ದರು.





