ಬೆಂಗಳೂರು : ಸೂರಜ್ ರೇವಣ್ಣ ವಿರುದ್ಧ ಸಲಿಂಗ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ಕೊಡುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಗೃಹ ಸಚಿವರು, ನಿನ್ನೆವರೆಗೂ ದೂರು ಬಂದಿರಲಿಲ್ಲ ಈಗ ಬಂದಿದೆ ಎಫ್.ಐ.ಆರ್ ಕೂಡ ಆಗಿದೆ. ಈ ಪ್ರಕರಣವನ್ನೂ ಸಿಐಡಿ ತನಿಖೆಗೆ ಕೊಡ್ತೀವಿ. ಈ ರೀತಿಯ ಪ್ರಕರಣಗಳನ್ನು ಸಿಐಡಿಗೆ ಕೊಡಬೇಕಾಗುತ್ತೆ.
ನನಗೇನು ಗೊತ್ತೋ ಅಷ್ಟನ್ನೇ ನಾನು ಹೇಳ್ತೀನಿ. ಏನ್ ಕ್ರಮ ತೆಗೆದುಕೊಳ್ಳಬೇಕು ಅದನ್ನು ಪೊಲೀಸರು ತೆಗೆದುಕೊಳ್ಳುತ್ತಾರೆ. ಅದನ್ನ ಬಿಟ್ಟು ರಾಜಕೀಯ ಪ್ರೇರಿತ ಅನ್ನೋದು ಏನೂ ನನಗೆ ಗೊತ್ತಿಲ್ಲ ಎಂದು ಹೇಳಿದರು.





