ಬೀದರ: ಕನ್ನಡದ ಖ್ಯಾತ ಕಾದಂಬರಿಕಾರಿ, ಕೇಂದ್ರ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಎಸ್ ಭೈರಪ್ಪಗೆ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠವು ʻ2024 ರ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿʼ ನೀಡಿ ಗೌರವಿಸಿದೆ.
ಶುಕ್ರವಾರ ಸುಕ್ಷೇತ್ರದ ಶ್ರೀಚೆನ್ನ ರೇಣುಕಾ ಬಸವ ಮಂಟಪಪದಲ್ಲಿ ಪೀಠಾಧಿಪತಿಗಳಾದ ʼಶ್ರೀ ಡಾ. ಚನ್ನಬೀರ ಶಿವಾಚಾರ್ಯರ ಪಾವನʼ ಸಾನಿಧ್ಯದಲ್ಲಿ ನಡೆದ ಗುರುಲಿಂಗ ಶಿವಾಚಾರ್ಯರ 55ನೇ ಪುಣ್ಯ ಸ್ಮರಣೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
ಪ್ರಶಸ್ತಿಯು ಎರಡು ಲಕ್ಷ ರೂಪಾಯಿ ನಗದು, ಎರಡು ತೊಲೆ ಚಿನ್ನದ ಪದಕವನ್ನು ಒಳಗೊಂಡಿದೆ.