ಆಲೂರು: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸಂಸದ ಪ್ರಜ್ವಲ್ ಅವರನ್ನು ನೆನೆದು ತಂದೆ ರೇವಣ್ಣ ಅನುಕಂಪ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ ನಡೆದ ಜಾ.ದಳ ಕಾರ್ಯಕರ್ತರ ಸಭೆಯಲ್ಲಿ ಎಚ್ಡಿ ರೇವಣ್ಣ ತಮ್ಮ ಮಗನ ಬಗ್ಗೆ ಅನುಕಂಪದ ಮಾತುಗಳನ್ನಾಡಿದ್ದಾರೆ.
ಮಾಜಿ ಶಾಸಕ ರೇವಣ್ಣನವರು ಇಂದು (ಸೆ.20) ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಮಗ ಪ್ರಜ್ವಲ್ ಅವರನ್ನು ನೆನಪಿಸಿಕೊಂಡು ಪ್ರಜ್ವಲ್ಗೆ ಏನು ಗೊತ್ತಾಗಲ್ಲ, ಪಾಪ ಅವನು ಒಳ್ಳೆ ಹುಡುಗ ಎಂದು ಹೇಳಿದ್ದಾರೆ. ನಂತರ ಸಭೆಯಲ್ಲ ಪಾಲ್ಗೊಂಡಿದ್ದ ಕಾರ್ಯಕರ್ತರಿಗೆ ಮುಂದಿನ ಮೂರು ವರ್ಷಗಳ ಕಾಲ ಸಮ್ಮನೆ ಇದ್ದು ಬಿಡಿ, ನನ್ನ ಕುಟುಂಬಕ್ಕೆ ಆದ ಅವಮಾನವನ್ನು ಬಡ್ಡಿ ಸಮೇತ ತೀರಿಸದಿದ್ದರೆ ನಾನು ಮಾಜಿ ಪ್ರಧಾನಿ ದೇವೇಗೌಡ ಅವರೇ ಮಗನೇ ಅಲ್ಲ ಎಂದು ಪ್ರತೀಕಾರದ ಮಾತುಗಳನ್ನು ನುಡಿದ್ದಾರೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಹಾಗೂ ಆತ್ಯಾಚಾರ ಪ್ರಕರಣದ ಅಡಿಯಲ್ಲಿ ಕೆಲವು ತಿಂಗಳುಗಳಿಂದ ಜೈಲು ಪಾಲಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದದವರು ನನ್ನ ಕೈಗೆ ಸಿಗದೇ ಎಲ್ಲಿ ಹೋಗುತ್ತಾರೆ ಎಂದು ಕಿಡಿಕಾರಿದ್ದಾರೆ. ಇಂದು ಜಿಲ್ಲೆಯಲ್ಲಿ ಜಾ.ದಳ ಪಕ್ಷದಲ್ಲಿ ದೇವೇಗೌಡರು, ಕುಮಾರಣ್ಣ ಹಾಗೂ ನಾನು ಉಳಿದಿರುವುದು ನಿಮ್ಮಂತಹ ಪುಣ್ಯಾತ್ಮರಿಂದಲೇ ಎಂದು ತಿಳಿಸಿದ್ದಾರೆ.