ಬೆಂಗಳೂರು : ನಮ್ಮ ಭಾರತ ಭವ್ಯ ಭಾರತ. ನಮ್ಮ ಭಾರತವನ್ನು ಯಾರು ಒಡೆಯುವ ಮಾತು ಅಡಬಾರದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಪ್ರತ್ಯೇಕ ದಕ್ಷಿಣ ಭಾರತ ನಿರ್ಮಾಣ ಕುರಿತು ಸಂಸದ ಡಿ.ಕೆ ಸುರೇಶ್ ನೀಡಿದ ಹೇಳಿಕೆ ವಿಚಾರವಾಗಿ, ಡಿಕೆ ಸುರೇಶ್ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅಖಂಡ ಭಾರತ ನಿರ್ಮಮಾಣಕ್ಕೆ ಸಾವಿರಾರು ಜನರ ಜೀವ ಅರ್ಪಣೆಯಾಗಿದೆ. ಗಾಂಧೀಜಿ ಅವರಿಂದ ಹಿಡಿದು, ಅನೇಕ ಹೋರಾಟಗಾರರು ದೇಶವನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ್ದಾರೆ. ಅದರಲ್ಲಿ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದು, ನೂರಾರು ವರ್ಷಗಳ ಫಲವಾಗಿ ನಮಗೆ ಭವ್ಯ ಭಾರತ ನಿರ್ಮಾಣವಾಗಿದೆ. ಹೀಗಾಗಿ ಯಾರೇ ಆದರೂ ದೇಶವನ್ನು ಒಗ್ಗೂಡಿಸಲು ಮಾತನಾಡಬೇಕು, ಬದಲಾಗಿ ಒಡೆಯುವ ಮಾತು ಸರಿಯಲ್ಲ ಎಂದು ಪರೋಕ್ಷವಾಗಿ ಡಿಕೆ ಬ್ರದರ್ಸ್ಗೆ ತಿವಿದಿದ್ದಾರೆ.
ನಮ್ಮ ಭಾರತ ಭವ್ಯವಾದ ಭಾರತ. ಪಾಕಿಸ್ತಾನ ವಿಭಜನೆ ಆದಾಗ ನಾವು ಯಾರೂ ಹುಟ್ಟಿರಲಿಲ್ಲ. ಆದರೆ ಅದರ ಇತಿಹಾಸ ನಮಗೆ ಗೊತ್ತಿದೆ. ನಮ್ಮ ದೇಶ ಒಂದು ರಾಷ್ಟ್ರ ಒಂದು ದೇಶ ಅಂತಾನೇ ಇರಬೇಕು ಬೇಕು ಎಂದು ಗೃಹ ಸಚಿವ ಪರಮೇಶ್ವರ್ ಹೇಳೀದ್ದಾರೆ.