ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಪ್ರಸಿದ್ಧ ಐತಿಹಾಸಿಕ ಮದ್ದೂರಮ್ಮ ಜಾತ್ರೆಯಲ್ಲಿ ತೇರು ಉರುಳಿ ಧರೆಗೆ ಬಿದ್ದ ಪರಿಣಾಮ ಓರ್ವ ಸ್ಥಳದಲ್ಲೆ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ.
ಜಾತ್ರೆಯ ಸಮಯದಲ್ಲಿ ತೇರು ಎಳೆಯುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಗಾಳಿ ಸಹಿತ ಮಳೆ ಬಂದ ಪರಿಣಾಮ ತೇರು ಉರುಳಿ ಧರಗೆ ಬಿದ್ದಿದೆ. ಜಾತ್ರೆಗೆ ವಿವಿಧ ಗ್ರಾಮಗಳಿಂದ 150 ಕುರ್ಜಿಗಳು ಆಗಮಿಸಿದ್ದವು. ತೇರಿನಲ್ಲಿದ್ದ ಹಲವರಿಗೆ ಗಾಯಗಾಳಗಿವೆ.





