Mysore
25
clear sky

Social Media

ಗುರುವಾರ, 05 ಫೆಬ್ರವರಿ 2026
Light
Dark

ರಾಜ್ಯದಲ್ಲಿ ಬಿಜೆಪಿ ಅಧೋಗತಿಗೆ ತಲುಪಿದೆ: ಎಂ.ಬಿ.ಪಾಟೀಲ್‌

ಬೆಂಗಳೂರು: ರಾಜ್ಯದ ಬಿಜೆಪಿ ಮನೆಯೊಂದು ಮೂರು ಅಲ್ಲ, ನೂರು ಬಾಗಿಲು ಆಗಿದ್ದು, ಅಧೋಗತಿಗೆ ತಲುಪಿದೆ. ಹಾಗಾಗಿ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಏಪ್ರಿಲ್‌.7) ಬಿಜೆಪಿ ಜನಾಕ್ರೋಶ ಯಾತ್ರೆ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದೆ. ಬಿಜೆಪಿಯದ್ದು ಮನೆಯೊಂದು ಮೂರು ಅಲ್ಲ ನೂರು ಬಾಗಿಲಾಗಿದೆ. ಅಲ್ಲಿ ವಿಜಯೇಂದ್ರ, ಆರ್‌.ಅಶೋಕ್‌ ಮತ್ತು ಸೋಮಣ್ಣ ಹೀಗೆ ಅನೇಕ ಬಣಗಳಿವೆ ತಿರುಗೇಟು ನೀಡಿದರು.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವರಾದ ಸತೀಶ್‌ ಜಾರಕಿಹೊಳಿ ಮತ್ತು ಈಶ್ವರ್‌ ಖಂಡ್ರೆ ಹೆಸರು ಪ್ರಸ್ತಾಪದ ಬಗ್ಗೆ ಮಾತನಾಡಿದ ಅವರು, ಇದರಲ್ಲಿ ತಪ್ಪೇನಿದೆ. ಕೆಪಿಸಿಸಿ ಅಧ್ಯಕ್ಷರಾಗಲು ಅವರಿಬ್ಬರೂ ಸಮರ್ಥರಿದ್ದಾರೆ. ಅಲ್ಲದೇ ನಮ್ಮ ಹೈಕಮಾಂಡ್‌ಗೆ ಯಾವಾಗ ಅಧ್ಯಕ್ಷರ ಸ್ಥಾನ ಬದಲಾವಣೆ ಮಾಡಬೇಕೆನ್ನಿಸುತ್ತದೆ, ಆಗ ಮಾಡುತ್ತಾರೆ. ಆದರೆ ನನಗೆ ಯಾವುದೇ ಆಹ್ವಾನ ಬಂದಿಲ್ಲ, ನಾನು ಕೇಳಿಯೂ ಇಲ್ಲ ಎಂದು ಹೇಳಿದರು.

Tags:
error: Content is protected !!