Mysore
26
clear sky

Social Media

ಭಾನುವಾರ, 08 ಫೆಬ್ರವರಿ 2026
Light
Dark

ಇವಿಎಂ ಮೇಲೆ ಅನುಮಾನ: ಗೃಹ ಸಚಿವ ಪರಮೇಶ್ವರ್

ತುಮಕೂರು: ವಿದ್ಯುನ್ಮಾನ ಮತಯಂತ್ರಗಳ‌ (ಇವಿಎಂ) ದೋಷದ ಬಗ್ಗೆ ನಾವು ಪ್ರಾರಂಭದಿಂದ ಹೇಳುತ್ತಿದ್ದೇವೆ. ಈಗಲೂ ಇವಿಎಂ ಮೇಲೆ ನಮಗೆ ಅನುಮಾನವಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಕೇರಳದಲ್ಲಿ ಅಣುಕು ಮತದಾನ ಮಾಡುವ ವೇಳೆ ಯಾವುದೇ ಬಟನ್‌ ಒತ್ತಿದರೂ ಬಿಜೆಪಿಗೆ ಮತ ಬಿದ್ದಿದೆ. ಬಿಜೆಪಿಯವರು ಎಲ್ಲ ಕ್ಷೇತ್ರಗಳಲ್ಲಿ ಹೀಗೆ ಮಾಡುವುದಿಲ್ಲ. ತುಂಬಾ ಬುದ್ಧಿವಂತಿಕೆಯಿಂದ ಇಂತಹ ಕೆಲಸ ಮಾಡುತ್ತಾರೆ. 150-200 ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರದಲ್ಲಿ ಹ್ಯಾಕ್‌ ಮಾಡುತ್ತಾರೆ ಎಂಬ ಅನುಮಾನವಿದೆ ಎಂದರು.

Tags:
error: Content is protected !!