Mysore
22
overcast clouds

Social Media

ಶನಿವಾರ, 02 ಮೇ 2026
Light
Dark

ಕಾರ ಹುಣ್ಣಿಮೆ ನೆಪದಲ್ಲಿ ಜಾನುವಾರುಗಳಿಗೆ ಚಿತ್ರಹಿಂಸೆ; ವಿದ್ಯುತ್ ಶಾಕ್ ನೀಡಿ ವಿಕೃತಿ

ವಿಜಯಪುರ: ಕಾರ ಹುಣ್ಣಿಮೆ ನೆಪದಲ್ಲಿ ಎತ್ತುಗಳು ಹಾಗೂ ಕುದುರೆಗಳಿಗೆ ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ಜಿಲ್ಲಾ ಪಂಚಾಯತ್ ಸಭಾಂಗಣದ ಮೈದಾನದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಎತ್ತು ಹಾಗೂ ಕುದುರೆಗಳ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಎತ್ತುಗಳು ಹಾಗೂ ಕುದುರೆಗಳು ಜೋರಾಗಿ ಓಡಲಿ ಎಂಬ ಕಾರಣಕ್ಕೆ ಅವುಗಳಿಗೆ ಕರೆಂಟ್ ಶಾಕ್ ನೀಡಲಾಗಿತ್ತು ಎಂದು ರೈತರು ಆರೋಪಿಸಿದ್ದಾರೆ.

ಸ್ಪರ್ಧೆ ಆಯೋಜನೆಗೂ ಮೊದಲೇ ರೈತರು ಎತ್ತುಗಳಿಗೆ ಕರೆಂಟ್ ಶಾಕ್ ಕೊಡುವುದು ಬೇಡ ಎಂದಿದ್ದರು. ಇದರ ಜೊತೆಗೆ ಪೊಲೀಸರು ಕೂಡ ಈ ವಿದ್ಯುತ್ ಶಾಕ್ ನೀಡಬೇಡಿ ಎಂದು ಆಯೋಜಕರಿಗೆ ಎಚ್ಚರಿಕೆ ನೀಡಿದ್ದರು.

ಯಾವುದಕ್ಕೂ ಕ್ಯಾರೆ ಎನ್ನದ ಸ್ಪರ್ಧೆ ಆಯೋಜಕರು ಏನೂ ಗೊತ್ತಿಲ್ಲದ ಮೂಕ ಪ್ರಾಣಿಗಳಿಗೆ ಕರೆಂಟ್ ಶಾಕ್ ನೀಡುವುದರ ಜೊತೆಗೆ ಬಾರುಕೋಲು ಹಾಗೂ ದೊಡ್ಡ ದೊಡ್ಡ ಬಡಿಗೆಗಳಿಂದ ಬಾರಿಸಿ ಚಿತ್ರಹಿಂಸೆ ನೀಡಿದ್ದಾರೆ.

ಕಾರ ಹುಣ್ಣಿಮೆ ಪ್ರಯುಕ್ತ ಮೂಕ ಪ್ರಾಣಿಗಳಿಗೆ ಈ ರೀತಿ ಚಿತ್ರಹಿಂಸೆ ನೀಡಿರುವುದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಈ ಬಗ್ಗೆ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ರೀತಿಯ ಘಟನೆಗಳು ಮರುಕಳಿಸದಂತೆ ಜಾಗೃತಿ ಮೂಡಿಸಬೇಕಿದೆ.

Tags:
error: Content is protected !!