ಬೆಂಗಳೂರು : ನಾನು ಇನ್ನೂ ಜೀವಂತವಾಗಿ ಉಳಿದಿದ್ದೇನೆ ಎಂದರೆ ಅದಕ್ಕೆ ಡಾ.ಮಂಜುನಾಥ್ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಹೃದಯ ಸಂಬಂದಿತ ಶಸ್ತ್ರ ಚಿಕಿತ್ಸೆಗಾಗಿ ಚೆನೈಗೆ ತೆರಳುವ ಮುನ್ನ ನಗರದಲ್ಲಿ ಸುದ್ದಗೋಷ್ಠಿಯನ್ನು ಏರ್ಪಡಿಸಿ ಮಾತನಾಡಿದ ಅವರು, ಡಾ.ಮಂಜುನಾಥ್ ಅವರು ವೈದ್ಯರಾಗಿ ನಾಡಿನಲ್ಲಿ ಲಕ್ಷಾಂತರ ಕುಟುಂಬಗಳನ್ನು ರಕ್ಷಣೆ ಮಾಡಿರುವುದು ಒಂದೆಡೆಯಾದರೆ, ಅವರ ಬೈಮೈದುನನಾದ ನನ್ನ ಜೀವನ ಶಸ್ತ್ರ ಚಿಕಿತ್ಸೆ ಬಳಿಕ ೧೭ವರ್ಷ ಮುಂದವರೆದಿದೆ ಎಂದರೆ ಅದಕ್ಕೂ ಕಾರಣ ಮಂಜುನಾಥ್ ಅವರೇ ಕಾರಣ.
ಮಂಜುನಾಥ್ ಸಲಹೆ ತೆಗೆದುಕೊಂಡಿದೇನೆ. ಅವರ ಮಾರ್ಗದರ್ಶನದಲ್ಲೇ, ಇಂದು ಶಸ್ತ್ರ ಚಿಕಿತ್ಸೆಗೆ ಹೊರಟಿದ್ದೇನೆ ಎಂದರು.
ನನಗೆ ಶಸ್ತ್ರ ಚಿಕಿತ್ಸೆ ಮಾಡುತ್ತಿರುವ ವೈದರೂ ಡಾ.ಮಂಜುನಾಥ್ ಅವರ ವಿದ್ಯಾರ್ಥಿಯಾಗಿದರು ಎಂದು ತಿಳಿಸಿದರು.




