Mysore
24
clear sky

Social Media

ಬುಧವಾರ, 18 ಮಾರ್ಚ್ 2026
Light
Dark

ಸಿಲಿಂಡರ್‌ಗಳ ಮೇಲೆ ಕಳ್ಳರ ಕಣ್ಣು!

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಸಂಘರ್ಷದಿಂದ ದೇಶದಲ್ಲಿ ಗ್ಯಾಸ್‌ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಮಧ್ಯೆ ಸಿಲಿಂಡರ್‌ ಕಳ್ಳತನ ಸಹ ಹೆಚ್ಚಾಗಿದ್ದು ಇದೀಗ ಮನೆಗಳಿಗೆ ಸಿಲಿಂಡರ್‌ ಸಪ್ಲೈ ಮಾಡುವಾಗ ಸಿಲಿಂಡರ್‌ ಕಳ್ಳತನ ಮಾಡಲಾಗುತ್ತಿದೆ.

ಬೆಂಗಳೂರಿನ ಶ್ರೀರಾಂಪುರದ ಬಳಿ ಮನೆಗಳಿಗೆ ಸಿಲಿಂಡರ್‌ ಸಪ್ಲೈ ಮಾಡುವಾಗ ಮನೆಯೊಳಗೆ ಸಿಲಿಂಡರ್‌ ಕೊಡಲು ಹೋಗಿದ್ದಾಗ ಆಟೋದಲ್ಲಿದ್ದ 3 ಸಿಲಿಂಡರ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ.

ಇನ್ನೂ ಕಲ್ಯಾಣನಗರ ಹಾಗೂ ನಾಗರಬಾವಿಯಲ್ಲಿಯೂ ಕೂಡ ಸಿಲಿಂಡರ್‌ ಕಳ್ಳತನ ಮಾಡಲಾಗಿದೆ. ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು ಸಿಲಿಂಡರ್‌ ಕದ್ದು ಪರಾರಿಯಾಗಿದ್ದಾರೆ. ಮತ್ತೊಂದೆಡೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದಲ್ಲಿಯೂ ಮನೆ ಬಳಿ ಸಿಲಿಂಡರ್‌ ಕಳ್ಳತನವಾಗಿದೆ.

 

 

 

 

 

 

Tags:
error: Content is protected !!