Mysore
20
overcast clouds
Light
Dark

ರೈಲಿನಲ್ಲಿ ಟಿಸಿ ಮೇಲೆ ಹಲ್ಲೆ, ಓರ್ವ ಸಾವು

ಬೆಳಗಾವಿ: ರೈಲಿನಲ್ಲಿ ಟಿಕೆಟ್‌ ಪರಿಶೀಲನೆ ವೇಳೆ ಟಿಕೆಟ್‌ ತೋರಿಸಿ ಎಂದಿದ್ದಕೆ ಟಿಸಿ ಸೇರಿ ಐವರ ಮೇಲೆ ಪ್ರಯಾಣಿಕನೊಬ್ಬ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ.

ಈ ಘಟನೆ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಡೆದಿದ್ದು, ಘಟನೆ ಸಂಭವಿಸುವಾಗ ರೈಲು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡ ಬಳಿ ಚಲಿಸುತ್ತಿತ್ತು.

ಪಾಂಡಿಚೇರಿಯಿಂದ ಮುಂಬಯಿ ಮಾರ್ಗವಾಗಿ ಚಲಿಸುತ್ತಿದ್ದ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನ ಎಸ್‌ 8 ಬೋಗಿಯಲ್ಲಿ ಇದ್ದ ಪ್ರಯಾಣಿಕನ ಬಳಿ ಟಿಸಿ ಟಿಕೆಟ್‌ ಕೇಳಿದ್ದಾರೆ. ಟಿಕೆಟ್‌ ತೋರಿಸದ ಪ್ರಯಾಣಿಕ ಟಿಸಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಹಲ್ಲೆ ತಡೆಯಲು ಹೋಗಿದ್ದ ಕೋಚ್‌ ಅಟೆಂಡರ್‌ಗೆ ಪ್ರಯಾಣಿಕ ಮನಸೋ ಇಚ್ಚೆ ಚಾಕು ಇರಿದಿದ್ದಾನೆ. ಆಸ್ಪತ್ರೆ ಸೇರಿಸಿದರು ಚಿಕಿತ್ಸೆ ಫಲಿಸದೇ ಕೋಚ್‌ ಅಟೆಂಡರ್‌ ಕೊನೆಯುಸಿರೆಳೆದಿದ್ದಾರೆ. ಇನ್ನು ಟಿಸಿ ಸೇರಿದಂತೆ ಉಳಿದ ಮೂವರು ಕೂಡ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರೆಯುತ್ತಿದೆ.

ಘಟನೆ ಬಳಿಕ ಆರೋಪಿಗಳು ರೈಲಿನಿಂದ ಜಿಗಿದು ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ.