ಬೆಂಗಳೂರು : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಮಾರ್ಚ್ 27ರಂದು ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಐವರು ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಏ.14 ರಂದು ಅಂಬೇಡ್ಕರ್ ಜಯಂತಿ ಪ್ರಯುಕ್ತ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಾಹಿತ್ಯ, ಹೋರಾಟ, ಪತ್ರಿಕೋದ್ಯಮ, ಸಂಘಟನೆ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಮಾಜ ಸುಧಾರಕರಿಗೆ ಪ್ರತಿ ವರ್ಷ ಏ.14ರ ಅಂಬೇಡ್ಕರ್ ಜಯಂತಿಯಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಪ್ರಶಸ್ತಿ ಪುರಸ್ಕೃತರು
ಮಂಗ್ಳೂರು ವಿಜಯ – ಸಾಹಿತ್ಯ
(ಬೆಂಗಳೂರು ಕೇಂದ್ರ ವಿಭಾಗ)
ಸಿ.ಎಂ.ಮುನಿಯಪ್ಪ-ಪತ್ರಿಕೋದ್ಯಮ
(ಬೆಂಗಳೂರು ವಿಭಾಗ)
ಎಚ್.ಎನ್.ಅಣ್ಣಯ್ಯ-ಹೋರಾಟ
(ಮೈಸೂರು ವಿಭಾಗ)
ಹನುಮಂತರಾವ್ ದೊಡ್ಡಮನಿ- ಸಾಹಿತ್ಯ/
ಸಂಘಟನೆ (ಕಲಬುರಗಿ ವಿಭಾಗ)
ಶೋಭ ಗಸ್ತಿ-ದೇವದಾಸಿ ವಿಮುಕ್ತಿ
(ಬೆಳಗಾವಿ ವಿಭಾಗ)





