Mysore
22
clear sky

Social Media

ಬುಧವಾರ, 21 ಜನವರಿ 2026
Light
Dark

ಕ್ರಿಕೆಟಿಗ ಚಹಾಲ್‌, ಧನ್ಯಶ್ರೀ ವಿಚ್ಛೇದನ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ

ಮುಂಬೈ: ಕ್ರಿಕೆಟಿಗ ಯುಜುವೇಂದ್ರ ಚಹಾಲ್‌ ಮತ್ತು ಅವರ ಪತ್ನಿ ಧನ್ಯಶ್ರೀ ವರ್ಮಾ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ಪುರಸ್ಕರಿಸಿದೆ.

ಗುರುವಾರ ಇಬ್ಬರೂ ಬಾಂದ್ರಾದ ಕೌಟುಂಬಿಕ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.

ಎರಡು ಕಡೆಯಿಂದ ಒಪ್ಪಿಗೆ ನಿಯಮಗಳ ಪಾಲನೆಯಾಗಿದೆ ಎಂದು ನ್ಯಾಯಾಲಯ ಪರಗಣಿಸಿ ಇಬ್ಬರಿಗೂ ವಿಚ್ಛೇದನ ನೀಡಿದೆ ಎಂದು ಚಾಹಲ್‌ ಪರ ವಕೀಲ ನಿತಿನ್‌ ಗುಪ್ತಾ ಹೇಳಿದ್ದಾರೆ.

ಫೆಬ್ರವರಿ 5ರಂದು, ಅವರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಜಂಟಿ ಅರ್ಜಿಯನ್ನು ಸಲ್ಲಿಸಿದ್ದರು.

 

Tags:
error: Content is protected !!