ಚೆನ್ನೈ: ಹನ್ನೊಂದು ಭಾರತೀಯ ಮೀನುಗಾರರನ್ನು ಶ್ರೀಲಂಕಾ ಬಿಡುಗಡೆ ಮಾಡಿದೆ. ಶ್ರೀಲಂಕಾದ ಜೈಲಿನಿಂದ ಬಿಡುಗಡೆಯಾದ ಹನ್ನೊಂದು ಭಾರತೀಯ ಮೀನುಗಾರರು ಇಂದು ತಾಯ್ನಾಡಿಗೆ ಹಿಂತಿರುಗಿದರು.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಮೀನುಗಾರರನ್ನು ಸಮುದ್ರ ಉಲ್ಲಂಘನೆ ಆರೋಪದ ಮೇಲೆ ಈ ವರ್ಷದ ಜನವರಿಯಲ್ಲಿ ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು.
ಶ್ರೀಲಂಕಾದ ನ್ಯಾಯಾಲಯವು ಇತ್ತೀಚೆಗೆ ಅವರನ್ನು ಬಿಡುಗಡೆ ಮಾಡಿತ್ತು. ಅವರು ಇಂದು ಮುಂಜಾನೆ ಕೊಲಂಬೊದಿಂದ ವಿಮಾನದ ಮೂಲಕ ಇಲ್ಲಿಗೆ ಆಗಮಿಸಿ ರಸ್ತೆ ಮೂಲಕ ತಮ್ಮ ಊರಿಗೆ ತೆರಳಿದ್ದಾರೆ.





