Mysore
26
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಉಕ್ರೇನ್ ತೊರೆಯಿರಿ: ಭಾರತೀಯರಿಗೆ ರಾಯಭಾರ ಕಚೇರಿ ಖಡಕ್‌ ಸೂಚನೆ

ಹೊಸದಿಲ್ಲಿ: ಉಕ್ರೇನ್ ಮೇಲಿನ ರಷ್ಯಾ ದಾಳಿ ಮತ್ತಷ್ಟು ತೀವ್ರಗೊಂಡಿದೆ. ಜಾಗತಿಕ ಮಟ್ಟದ ಒತ್ತಡದ ನಡುವೆ ತಮ್ಮ ಹಟವನ್ನು ಮುಂದುವರಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಅನ್ನು ಸದೆಬಡಿಯುವ ಶಪಥ ಮಾಡಿದ್ದಾರೆ. ಹೀಗಾಗಿ ಉಕ್ರೇನ್ ಪ್ರವಾಸ ಕೈಗೊಳ್ಳುವವರಿಗೆ ಎಚ್ಚರಿಕೆ ನೀಡಿರುವ ಭಾರತ, ಈಗಾಗಲೇ ಯುದ್ಧಪೀಡಿತ ದೇಶದಲ್ಲಿ ಇರುವವರು ಕೂಡಲೇ ಅಲ್ಲಿಂದ ನಿರ್ಗಮಿಸುವಂತೆ ಸೂಚಿಸಿದೆ.

“ಉಕ್ರೇನ್ ಉದ್ದಕ್ಕೂ ಭದ್ರತಾ ಪತಿಸ್ಥಿತಿ ಕ್ಷೀಣಿಸುತ್ತಿರುವುದು ಮತ್ತು ಇತ್ತೀಚಿನ ಹಗೆತನದ ವೃದ್ಧಿಯ ಹಿನ್ನೆಲೆಯಲ್ಲಿ, ಭಾರತ ರಾಷ್ಟ್ರೀಯರು ಉಕ್ರೇನ್‌ಗೆ ಪ್ರಯಾಣಿಸದಂತೆ ಸಲಹೆ ನೀಡಲಾಗಿದೆ” ಭಾರತದ ರಾಯಭಾರ ಕಚೇರಿ ಸೂಚನೆ ಹೊರಡಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!