ಹೊಸದಿಲ್ಲಿ: ಮುಂಬೈ ದಾಳಿಯ ಸಂಚುಕೋರ ತಹವ್ವೂರ್ ರಾಣಾ ಹಸ್ತಾಂತರ ಯಶಸ್ವಿಯಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ತಿಳಿಸಿದೆ.
26/11ರ ಮುಂಬೈ ದಾಳಿ ನಡೆದು ಅನೇಕ ವರ್ಷಗಳ ನಂತರ ಆರೋಪಿ ಹಸ್ತಾಂತರ ನಡೆದಿದೆ. ಅಮೆರಿಕದ ನ್ಯಾಯಾಂಗ ಇಲಾಖ, ಸ್ಕೈ ಮಾರ್ಷಲ್ಸ್, ಎನ್ಐಎ ತಂಡ ಹಾಗೂ ಭಾರತದ ಗುಪ್ತಚರ ತಂಡಗಳ ಕಾರ್ಯಾಚರಣೆಯಿಂದ ಆರೋಪಿಯ ಹಸ್ತಾಂತ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಎನ್ಐಎ ಪ್ರಕಟಣೆಯಲ್ಲಿ ತಿಳಿಸಿದೆ.





