Mysore
17
overcast clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಅಧಿಕೃತ ನಿವಾಸ ತೊರೆದ ಮಾಜಿ ಉಪ ರಾಷ್ಟ್ರಪತಿ ಜಗದೀಪ್‌ ಧನಖರ್‌

jagadeep dhankar

ಹೊಸದಿಲ್ಲಿ : ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧನಖರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ತಿಂಗಳ ಬಳಿಕ ಸೋಮವಾರ (ಸೆಪ್ಟೆಂಬರ್-1) ಉಪ ರಾಷ್ಟ್ರಪತಿ ಅಧಿಕೃತ ನಿವಾಸವನ್ನು ತೊರೆದಿದ್ದಾರೆ. ಧನಖರ್‌ ಅವರು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಸಂಸತ್ತಿನ ಮಳೆಗಾಲದ ಮೊದಲ ಅಧಿವೇಶನದಲ್ಲಿ ರಾಜೀನಾಮೆ ನೀಡಿದ್ದರು.

ಕೇಂದ್ರ ಲೋಕೋಪಯೋಗಿ ಇಲಾಖೆಯು ಅವರ ನಿವೃತ್ತಿ ಮನೆಯನ್ನು ಸಿದ್ಧಪಡಿಸುವವರೆಗೆ ಅವರು ರಾಜಧಾನಿಯ ಛತ್ತರ್‌ಪುರದಲ್ಲಿರುವ ಭಾರತೀಯ ಲೋಕದಳ ಅಧ್ಯಕ್ಷ ಅಭಯ್ ಚೌತಾಲ ಅವರ ತೋಟದ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಅಧಿಕೃತ ಬಂಗಲೆಗಳಲ್ಲಿ ಅತಿ ದೊಡ್ಡ ವರ್ಗವಾದ ಟೈಪ್ -8 ಅನ್ನು ನೀಡಲಾಗಿದೆ. ದುರಸ್ತಿ ಮತ್ತು ನವೀಕರಣಕ್ಕೆ ಸುಮಾರು ಮೂರು ತಿಂಗಳುಗಳು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಸೆಪ್ಟೆಂಬರ್ 9 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಎನ್‌ಡಿಎ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಮತ್ತು ವಿರೋಧ ಪಕ್ಷವು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ.

Tags:
error: Content is protected !!