Mysore
25
broken clouds

Social Media

ಶನಿವಾರ, 21 ಮಾರ್ಚ್ 2026
Light
Dark

ಚಾಮರಾಜನಗರಕ್ಕೆ ಹೆಚ್ಚುವರಿ ನವೋದಯ ಶಾಲೆಗೆ ಮನವಿ

ಹೊಸದಿಲ್ಲಿ : ಚಾಮರಾಜನಗರ ಜಿಲ್ಲೆಗೆ ಹೆಚ್ಚುವರಿ ನವೋದಯ ಶಾಲೆಗಳನ್ನು ಮಂಜೂರು ಮಾಡುವಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ಚಾಮರಾಜನಗರ ಸಂಸದ ಸುನೀಲ್‌ ಬೋಸ್‌ ಮನವಿ ಮಾಡಿದರು.

ಮಂಗಳವಾರ ಹೊಸದಿಲ್ಲಿಯ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ಕಚೇರಿಯಲ್ಲಿ ಭೇಟಿಯಾದ ಸಂಸದ ಸುನೀಲ್‌ ಭೋಸ್‌ ಈಗಾಗಲೇ ಇರುವ ನವೋದಯ ಶಾಲೆಗಳಿಗೆ ಉತ್ತಮ ಸವಲತ್ತು ನೀಡಬೇಕು. ಜೊತೆಗೆ ಜಿಲ್ಲೆಗೆ ಹೆಚ್ಚುವರಿ ಶಾಲೆಗಳನ್ನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಶಿಕ್ಷಣ ಸಚಿವರು ಪೂರಕವಾಗಿ ಸ್ಮಂದಿಸಿದರು.

Tags:
error: Content is protected !!