ನವದೆಹಲಿ: ದೇಶಾದ್ಯಂತ ಇಂದು 26ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಹಿನ್ನೆಲೆಯಲ್ಲಿ ಹುತಾತ್ಮ ಯೋಧರನ್ನು ಸ್ಮರಿಸಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕಾರ್ಗಿಲ್ ವಿಜಯದ್ ದಿವಸ್ ಸಂದರ್ಭದಲ್ಲಿ ದೇಶವಾಸಿಗಳಿಗೆ ಅನೇಕ ಶುಭಾಶಯಗಳು.
ಈ ಸಂದರ್ಭವು ದೇಶದ ಸ್ವಾಭಿಮಾನವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಭಾರತ ಮಾತೆಯ ಆ ಧೈರ್ಯಶಾಲಿ ಪುತ್ರರ ಅಪ್ರತಿಮ ಧೈರ್ಯ ಮತ್ತು ಶೌರ್ಯವನ್ನು ನೆನಪಿಸುತ್ತದೆ. ಮಾತೃಭೂಮಿಗಾಗಿ ಪ್ರಾಣ ನೀಡುವ ಅವರ ಉತ್ಸಾಹವು ಪ್ರತಿ ಪೀಳಿಗೆಗೆ ಸ್ಪೂರ್ತಿ ನೀಡುತ್ತದೆ. ಜೈ ಎಂದು ಹಿಂದೆ ಬರೆದುಕೊಂಡಿದ್ದಾರೆ.






