ಮೈಸೂರು: ಉದಯಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ಗಲಾಟೆಯ ಹಿಂದೆ ಆರ್ಎಸ್ಎಸ್ನ ಕೈವಾಡಿವಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.
ಇಂದು (ಫೆ.13) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್.ಅಶೋಕ್ ಧಮ್ಕಿಗೆ ಹೆದರಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಸುಮಾರು ಒಂದು ಸಾವಿರ ಜನರ ಮೇಲೆ ದೂರು ದಾಖಲು ಆಗಿದೆ. ಹಲವರನ್ನು ಬಂಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಷ್ಟು ಜನರನ್ನು ಬಂಧಿಸುತ್ತಾರೆ ಎಂಬ ಮಾಹಿತಿ ಇಲ್ಲ. ಅಲ್ಲಿ ನೆರೆದಿದ್ದ ಪೈಕಿ ಒಂದು ಸಾವಿರ ಜನರು ಇರಲೇ ಇಲ್ಲ ಎಂದು ತಿಳಿಸಿದರು.
ಉದಯಗಿರಿ ಪೊಲೀಸ್ ಠಾಣೆ ಗಲಾಟೆಗೆ ಆರ್ಎಸ್ಎಸ್ನ ಸುರೇಶ್ ಎಂಬಾತ ಕಾರಣ. ಈ ಘಟನೆಯ ಹಿಂದೆ ಯಾರಿದ್ದಾರೆ ಎಂಬುದರ ತನಿಖೆ ಆಗಬೇಕು. ಈ ಸಂಬಂಧ ಕಂಪ್ಲೆಟ್ ನೀಡಲು ಹೋದರೆ, ವಿಪಕ್ಷ ನಾಯಕರು ಪೊಲೀಸರ ಜೊತೆ ಸಭೆ ನಡೆಸುತ್ತಿದ್ದರು. ಪೊಲೀಸ್ ಠಾಣೆಯ ಒಳಗೆ ಸಭೆ ನಡೆಸಲು ಅವಕಾಶ ಇದೆಯಾ, ಇದರ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದರು.
ಮುಂದುವರಿದು ಮಾತನಾಡುತ್ತಾ, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರನ್ನು ಆರ್ಎಸ್ಎಸ್ ಚಡ್ಡಿತೊಳೆಯಲಿಕ್ಕೆ ಇಟ್ಟುಕೊಂಡಿರುವುದು. ಛಲವಾದಿ ನಾರಾಯಣ್ಗೆ ಎಂಎಲ್ಸಿ ಸ್ಥಾನ ನೀಡಿರುವುದೇ ಆರ್ಎಸ್ಎಸ್ ಚಡ್ಡಿ ಹೊತ್ತಾಡಲು ಹಾಗೂ ವಿರೋಧ ಪಕ್ಷದ ನಾಯಕರನ್ನು ಬೈಯ್ಯಲು ಎಂದು ಹೇಳಿದರು.
ಪೊಲೀಸರು ಆರೆಸ್ಟ್ ಮಾಡಿರುವ 15ಜನರ ಪೈಕಿ ಕೆಲವರು ಮುಗ್ದರಿದ್ದಾರೆ. ಪಾರದರರ್ಶಕ ತನಿಖೆ ಆಗೇಕು, ಒನ್ಸೈಡ್ ಆಗಬಾರದು ಎಂದು ಹೇಳಿದರು.





