Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮುಡಾ ಅನುದಾನ ಬಳಕೆ ಮಾಡುವುದು ತಪ್ಪಲ್ಲ: ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನ ಬಳಕೆಗೆ ಅವಕಾಶ ಇದೆ ಎಂದು ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಡಾ ವ್ಯಾಪ್ತಿಯಲ್ಲಿ ಬರುವ ಶ್ರೀರಂಗಪಟ್ಟಣ ಹಾಗೂ ವರುಣ ಕ್ಷೇತ್ರದ ಅಭಿವೃದ್ಧಿಗೆ ಹಣ ಖರ್ಚು ಮಾಡಲಾಗುತ್ತದೆ. ಸಾರ್ವಜನಿಕರ ಕ್ಷೇತ್ರದ ಅಭಿವೃದ್ಧಿ ಕಾನೂನು ಪ್ರಕಾರ ಆಗಿದೆಯೇ ಹೊರತು ದುರುಪಯೋಗ ಆಗಿಲ್ಲ. ಮುಡಾ ಹಣ ಬಳಕೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಇನ್ನು ಪ್ರಪಂಚದಲ್ಲೇ ನಮ್ಮ ಸರ್ಕಾರ ತಂದಿರುವ ಗ್ಯಾರಂಟಿ ಯೋಜನೆಯಗಳು ಯಾರೂ ಜಾರಿ ಮಾಡಿಲ್ಲ. ವಿಪಕ್ಷದವರು ರಾಜಕೀಯ ಕಾರಣಕ್ಕಾಗಿ ತಲೆಬುಡವಿಲ್ಲದ ಆರೋಪ ಮಾಡಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಯಾವ ಕಾರಣಕ್ಕಾಗಿ ರಾಜೀನಾಮೆ ಕೊಡಬೇಕು. ಎಲ್ಲಾ ವೃತ್ತಿಯಲ್ಲಿ ತಪ್ಪು ಮಾಡುವವರು ಇದ್ದಾರೆ. ಕಪ್ಪುಚುಕ್ಕೆ ತರುವವರು ಇದ್ದಾರೆ ಎಂದು ಅಪ್ಪನ ಪರ ಬ್ಯಾಟ್‌ ಮಾಡಿದರು.

 

Tags: