Mysore
18
overcast clouds

Social Media

ಗುರುವಾರ, 08 ಜನವರಿ 2026
Light
Dark

ಚಾಮರಾಜ ಕ್ಷೇತ್ರದಲ್ಲೇ ಮನೆ, ಕಚೇರಿ ತೆರೆಯುವೆ : ಮಾಜಿ ಸಂಸದ ಪ್ರತಾಪ್‌ ಸಿಂಹ

prathap simha

ಮೈಸೂರು : ನಾನು ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ರಾಷ್ಟ್ರ ಮಟ್ಟಕ್ಕೆ ಹೋಗಲಿಲ್ಲ ಅಂದ್ರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ಆಗುತ್ತಾ? ಸ್ಥಳೀಯ ಮಟ್ಟಕ್ಕೆ ಬರಬೇಕಲ್ಲವೇ ಎಂದು ಮಾಜಿ ಸಂಸದ ಪ್ರತಾಪ್‌ಸಿಂಹ ಪ್ರಶ್ನಿಸಿದ್ದಾರೆ.

ಮಾಜಿ ಶಾಸಕರಾದ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಈ ಹಿಂದೆ ಕೂಡ ತಿಳಿಸಿದಂತೆ ರಾಜ್ಯ ರಾಜಕಾರಣಕ್ಕೆ ಪ್ರವೇಶವಾಗಿದೆ. ಚಾಮರಾಜ ಕ್ಷೇತ್ರ ಸುಶಿಕ್ಷಿತರ ಕ್ಷೇತ್ರವಾಗಿದೆ. ಐದು ವರ್ಷಕ್ಕೊಮ್ಮೆ ಬದಲಾಗುವ ಶಾಸಕರು ಈ ಕ್ಷೇತ್ರಕ್ಕೆ ಬೇಡ. ಶಂಕರಲಿಂಗೇಗೌಡರ ರೀತಿ ಐದು ಬಾರಿ ಆದ ಅಭಿವೃದ್ಧಿ ಮಾಡುವ ಶಾಸಕರು ಬೇಕು. ಜನ ಕವರ್‌ಗೆ ಕಾಸು ಹಾಕಿ ಕೊಡುವುದಕ್ಕೆ ಅಪೇಕ್ಷೆ ಪಡುವ ಮತದಾರರಿಲ್ಲ. ಈ ಕ್ಷೇತ್ರದ ಮನೆ, ಕಚೇರಿ ತೆರೆಯುತ್ತೇನೆ. ಟಿಕೆಟ್ ಕೊಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ.

ರಾಷ್ಟ್ರಮಟ್ಟದಿಂದ ರಾಜ್ಯ ಮಟ್ಟದ ರಾಜಕೀಯಕ್ಕೆ ಕಾಲಿಟ್ಟಿರುವ ಮಾಜಿ ಸಂಸದ ಪ್ರತಾಪ್‌ ಸಿಂಹ ಚಾಮರಾಜ ಕ್ಷೇತ್ರದಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲೆ ಅದೇ ಕ್ಷೇತ್ರದ ಮಾಜಿ ಶಾಸಕ ಎಲ್.ನಾಗೇಂದ್ರ ಪ್ರತಾಪ್‌ ಸಿಂಹ ವಿರುದ್ಧ ಹರಿಹಾಯ್ದಿದ್ದಾರೆ.  ಸದ್ಯ ಇಬ್ಬರ ಮಾತಿನ ಸಮರ ತಾರಕಕ್ಕೇರಿದೆ. ಇದು ಹೈಕಮಾಂಡ್‌ ಮುಟ್ಟುತ್ತಾ ಎಂದು ಕಾದು ನೋಡಬೇಕಿದೆ.

Tags:
error: Content is protected !!