Mysore
17
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಫಾದರ್ಸ್‌ ಡೇ: ತಂದೆ ನೆನೆದು ಭಾವುಕ ಪೋಸ್ಟ್‌ ಮಾಡಿದ ವಿನೀಶ್‌ ದರ್ಶನ್‌

ಬೆಂಗಳೂರು: ಇಂದು (ಜೂನ್‌.16) ವಿಶ್ವ ಅಪ್ಪಂದಿರ ದಿನ. ಕನ್ನಡದ ಸ್ಟಾರ್‌ ನಟ ದರ್ಶನ್‌ ಪುತ್ರ ವಿನೀಶ್‌ ದರ್ಶನ್‌ ಅವರು ತಮ್ಮ ತಂದೆ ನೆನೆದು ಭಾವುಕ ಪೋಸ್ಟ್‌ ಮಾಡಿದ್ದಾರೆ.

ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿ ತನಿಖೆ ಎದುರಿಸುತ್ತಿರುವ ನಟ ದರ್ಶನ್‌ ನೆನೆದು ಅವರ ಮಗ ಇನ್ಸ್ಟಾ ಗ್ರಾಂ ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡು ಅಪ್ಪಂದಿರ ದಿನದ ಶುಭಾಷಯ ಕೋರಿದ್ದಾರೆ. ಸದ್ಯ ಈ ಪೋಸ್ಟ್‌ ಭಾರೀ ವೈರಲ್‌ ಆಗುತ್ತಿದೆ.

ತಮ್ಮ ಇನ್ಸ್ಟಾಗ್ರಾಂ ನಲ್ಲಿ ತಂದೆ ದರ್ಶನ್‌ ಹಾಗೂ ತಾಯಿ ವಿಜಯಲಕ್ಷ್ಮಿ ಜತೆಗಿನ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಂದೆಗೆ ವಿಷ್‌ ಮಾಡಿದ್ದಾರೆ ವಿನೀಶ್‌.

ಇನ್ನು ಆ ಫೋಟೋ ಮೇಲೆ “ಅಪ್ಪಂದಿರ ದಿನದ ಶುಭಾಷಯಗಳು ನಾನು ನಿಮ್ಮನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದು, ನನ್ನ ಪಾಲಿಗೆ ಯಾವತ್ತಿಗೂ ನೀವೇ ಹೀರೋ” ಎಂದು ಬರೆದುಕೊಂಡಿದ್ದಾರೆ.

ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರನ್ನು ಜೂನ್‌.20 ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್‌ ಆದೇಶ ಹೊರಡಿಸಿದ್ದು, ಸದ್ಯ ದರ್ಶನ್‌ ವಚಾರಣೆ ಎದುರಿಸುತ್ತಿದ್ದಾರೆ.

Tags:
error: Content is protected !!