Mysore
20
overcast clouds
Light
Dark

ಉತ್ತಮ ಸಮಯಕ್ಕಾಗಿ ಕಷ್ಟಗಳನ್ನು ಎದುರಿಸಬೇಕು: ವೈರಲ್‌ ಆಯ್ತು ಸುಮಲತಾ ಟ್ವೀಟ್‌!

ಮಂಡ್ಯ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದರ್ಶನ್‌ ಬಂಧನವಾಗಿ 20 ದಿನಗಳು ಕಳೆದಿದ್ದರೂ ಅವರ ಪರಮಾಪ್ತ, ಮದರ್‌ ಇಂಡಿಯಾ ಎಂದೇ ಕರೆಯಲ್ಪಡುವ ಸುಮಲತಾ ಅಂಬರೀಶ್‌ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದು ದರ್ಶನ್‌ ಅಭಿಮಾನಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಸುಮಲತಾ ನಡೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇದೀಗ ಅವರ ಟ್ವೀಟ್‌ ಒಂದು ಸಖತ್‌ ವೈರಲ್‌ ಆಗಿದೆ.

ಮಾಜಿ ಸಂಸದೆ ಸುಮಲತಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಭಗವದ್ಗೀತೆ ಶ್ಲೋಕವೊಂದನ್ನು ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ” ಉತ್ತಮ ಸಮಯಗಳು ಬರುವ ಮುನ್ನ ಸಾಕಷ್ಟು ಕಷ್ಟಗಳು ಬರುತ್ತವೆ. ಆದರೆ ನಾವು ನಂಬಿಕೆಯನ್ನು ಕಳೆದುಕೊಳ್ಳಬಾರದು ಎಂದು ಪೋಸ್ಟ್‌ ಮಾಡಿದ್ದಾರೆ.

ದರ್ಶನ್‌ ಸುಮಲತಾರ ಎಲ್ಲಾ ಸಮಯದಲ್ಲೂ ಜತೆಯಾಗಿ ಕೆಲಸ ನಿರ್ವಹಿಸಿದ್ದಾರೆ. ಸುಮಲತಾ ಅವರನ್ನು ಮದರ್‌ ಇಂಡಿಯಾ ಎಂದೇ ಕೂಗುತ್ತಿದ್ದ ನಟ, ಮಂಡ್ಯ ಲೋಕ ಚುನಾವಣೆಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಇತ್ತ ಸುಮಲತಾ ಕೂಡಾ ದರ್ಶನ್‌ರನ್ನು ತಮ್ಮ ಮೊದಲ ಮಗ ಎಂದೇ ಕರೆಯುತ್ತಿದ್ದರು.