ಭಾಸ್ಕರ್ ಡಾಟ್ ಕಾಮ್ ವರದಿ ಪ್ರಕಾರ ಇಂದು ( ಮಾರ್ಚ್ 15 ) ಬೆಳಗ್ಗೆ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅಮಿತಾಬ್ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಿ ಆಂಜಿಯೋಪ್ಲಾಸ್ಟಿಗೆ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಹೇಳಲಾಗಿದೆ.
ಪ್ರತಿ ಭಾನುವಾರದಂದು ಅಮಿತಾಬ್ ತಮ್ಮ ಮನೆಯ ಜಲ್ಸಾದ ಹೊರಗೆ ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಅಭಿಮಾನಿಗಳನ್ನು ಭೇಟಿಯಾದ ಚಿತ್ರಗಳನ್ನು ಹಂಚಿಕೊಂಡಿದ್ದು, ಹಂಬಲ್ ಬಿಯಾಂಡ್ ಎಂದು ಬರೆದುಕೊಂಡಿದ್ದರು.
ಅಮಿತಾಬ್ ಅವರು ಬಹು ನಿರೀಕ್ಷಿತ ಚಿತ್ರವಾದ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆಯ ಕಲ್ಕಿ 2898 AD ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಇತ್ತೀಚೆಗೆ ಬಿಡುಗಡೆಗೊಂಡ ಟೈಗರ್ ಶ್ರಾಫ್ ಮತ್ತು ಕೃತಿ ಸನನ್ ನಟನೆಯ ಗಣಪತ್ ಇವರ ಹಿಂದಿನ ಚಿತ್ರವಾಗಿತ್ತು.





