Mysore
32
scattered clouds

Social Media

ಭಾನುವಾರ, 29 ಮಾರ್ಚ್ 2026
Light
Dark

ಓದುಗರ ಪತ್ರ | ಮರಗಳ ತೆರವು ಪರಿಸರಕ್ಕೆ ಮಾರಕ

mysuru tree cutting case

ಮೈಸೂರಿನ ಹೈದರಾಲಿ ರಸ್ತೆಯಲ್ಲಿದ್ದ ೪೦ಕ್ಕೂ ಹೆಚ್ಚು ಮರಗಳನ್ನು ರಸ್ತೆ ಅಗಲೀಕರಣದ ನೆಪದಲ್ಲಿ ಕಡಿದುರುಳಿಸಿರುವುದು ಬೇಸರದ ಸಂಗತಿ.

ವಾತಾವರಣವನ್ನು ತಂಪಾಗಿಡಲು ನಗರ ಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತದೆ. ಸಾಕಷ್ಟು ಮರಗಳಿದ್ದರೆ ಸಕಾಲಕ್ಕೆ ಮಳೆ ಯಾಗುತ್ತದೆ. ರಸ್ತೆ ಅಭಿವೃದ್ಧಿಗಾಗಿ ಏಕಾಏಕಿ ೪೦ಕ್ಕೂ ಹೆಚ್ಚು ಮರಗಳನ್ನು ಕಡಿದುರುಳಿಸಲು ಅನುಮತಿ ನೀಡಿರುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ತಾಪಮಾನ ಇನ್ನಷ್ಟು ಹೆಚ್ಚಾಗಿ ಬದುಕುವುದೇ ದುಸ್ತರವಾಗುತ್ತದೆ. ಸಂಬಂಧಪಟ್ಟವರು ಇನ್ನಾದರೂ ನಗರದಲ್ಲಿ ಮರಗಳನ್ನು ಉಳಿಸುವ ಮೂಲಕ ಪರಿಸರ ಸಮತೋಲನ ಕಾಪಾಡಲು ಕ್ರಮ ಕೈಗೊಳ್ಳಬೇಕಾಗಿದೆ. -ಎನ್. ಬಂಗಾರಸ್ವಾಮಿ ಮನಗಾಪುರ, ಚಾಮರಾಜನಗರ

Tags:
error: Content is protected !!