ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ರವರು ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಇತ್ತೀಚೆಗೆ ಮಾಡಿದ ಭಾಷಣವನ್ನು ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದು, ಆಡಳಿತಾರೂಢ ಸರ್ಕಾರ ರಾಜ್ಯಪಾಲರಿಂದ ಸುಳ್ಳುಗಳನ್ನು ಹೇಳಿಸಿದೆ ಎಂದು ಆರೋಪಿಸಿದ್ದಾರೆ. ‘ರಾಜ್ಯ ಸರ್ಕಾರವೇ ಸಿದ್ಧಪಡಿಸಿದ ಈ ಭಾಷಣವನ್ನು ರಾಜ್ಯಪಾಲರು ಗಿಣಿ ಪಾಠದಂತೆ ಒಪ್ಪಿಸಿದ್ದಾರೆಯೇ ವಿನಾ ಇದರಲ್ಲಿ ಅವರ ಸ್ವಂತಿಕೆ ಏನೂ ಇದ್ದಂತೆ ತೋರುತ್ತಿಲ್ಲ’ ಎಂದಿರುವ ಆರ್. ಅಶೋಕ್ರವರಿಗೆ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರು ಕೇವಲ ಉತ್ಸವ ಮೂರ್ತಿಯಂತೆ ಎಂಬುದು ತಿಳಿದಿಲ್ಲವೇ? ಈ ಹಿಂದೆ ಬಿಜೆಪಿ ಸರ್ಕಾರ ಅಽಕಾರದಲ್ಲಿದ್ದಾಗ, ಉಪ ಮುಖ್ಯಮಂತ್ರಿಯಾಗಿದ್ದ ಅಶೋಕ್ರವರು ಅವರ ಅಽಕಾರಾವಽ ಯಲ್ಲಿದ್ದ ರಾಜ್ಯಪಾಲರ ಗಿಣಿ ಪಾಠವನ್ನು ಈಗ ಮರೆತಿದ್ದಾರೆಯೇ? –ಕೆ. ವಿ. ವಾಸು, ವಕೀಲರು, ವಿವೇಕಾನಂದ ನಗರ, ಮೈಸೂರು.





