Mysore
24
clear sky

Social Media

ಭಾನುವಾರ, 12 ಏಪ್ರಿಲ 2026
Light
Dark

ಓದುಗರ ಪತ್ರ | ಪ್ರಾಣಿಗಳ ಬಗ್ಗೆ ಕಾಳಜಿ ವಹಿಸಿ

ಓದುಗರ ಪತ್ರ

ಮಳೆಗಾಲ ಆರಂಭವಾಗುತ್ತಿದ್ದು, ಜನರು ಸಂಚರಿಸುವಾಗ ಮಳೆ ಬಂದರೆ ಸುರಕ್ಷಿತ ಸ್ಥಳಕ್ಕೆ ಹೋಗಿ ಆಶ್ರಯ ಪಡೆಯುತ್ತಾರೆ. ಆದರೆ ನಾಯಿ, ಬೆಕ್ಕು ಸೇರಿದಂತೆ ಇನ್ನಿತರ ಪ್ರಾಣಿಗಳು ಕಾರು, ಬಸ್, ಆಟೋ ಇತ್ಯಾದಿ ವಾಹನಗಳ ಕೆಳಗೆ ಮಳೆಯಿಂದ ರಕ್ಷಣೆ ಪಡೆಯುತ್ತವೆ.

ವಾಹನಗಳ ಕೆಳಗೆ ಪ್ರಾಣಿಗಳಿದ್ದಾಗ ವಾಹನ ತೆಗೆದರೆ ಅವುಗಳ ಪ್ರಾಣಕ್ಕೇ ಕುತ್ತಾಗುತ್ತದೆ. ವಾಹನ ಚಾಲಕರು ಮಳೆಗಾಲದ ಸಂದರ್ಭದಲ್ಲಿ ವಾಹನಗಳ ಕೆಳಗೆ ಪ್ರಾಣಿಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ವಾಹನ ತೆಗೆಯುವುದು ಒಳಿತು.

-ಗೋವಿತ್ ಕಿರಣ್, ರಾಜೇಂದ್ರ ನಗರ ,ಮೈಸೂರು

Tags:
error: Content is protected !!