Mysore
32
scattered clouds

Social Media

ಶನಿವಾರ, 21 ಫೆಬ್ರವರಿ 2026
Light
Dark

ಓದುಗರ ಪತ್ರ | ಆಹಾರದ ಗುಣಮಟ್ಟ ಪರಿಶೀಲಿಸಿ ಹಂಚಿಕೆ ಮಾಡಿ

dgp murder case

ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರ ಗ್ರಾಮದ ಗೋಕುಲ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ವಿಷಾಹಾರ ಸೇವಿಸಿ ಅಸ್ವಸ್ಥಗೊಂಡಿದ್ದು, ಈ ಪೈಕಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಟಿ.ಕಾಗೇಪುರ ಗ್ರಾಮದಲ್ಲಿ ರಾಜಸ್ಥಾನಿ ಸಮಾಜದವರು ಕಲ್ಯಾಣ ಮಂಟಪವೊಂದರಲ್ಲಿ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದು, ಹೋಟೆಲ್‌ವೊಂದರಿಂದ ಆಹಾರವನ್ನು ತರಿಸಿ ಸೇವನೆ ಮಾಡಿದ್ದಾರೆ. ಬಳಿಕ ಉಳಿದ ಆಹಾರವನ್ನು ಸಮೀಪದಲ್ಲೇ ಇದ್ದ ಗೋಕುಲ ವಿದ್ಯಾಸಂಸ್ಥೆಯ ಮಕ್ಕಳಿಗೆ ನೀಡಿದ್ದಾರೆ. ಈ ಆಹಾರ ಸೇವಿಸಿದ 50ಕ್ಕೂ ಹೆಚ್ಚು ರಾಜಸ್ಥಾನಿ ಸಮಾಜದವರು ಹಾಗೂ ಗೋಕುಲ ವಿದ್ಯಾಸಂಸ್ಥೆಯ 30 ಮಕ್ಕಳಿಗೆ ವಾಂತಿ ಭೇದಿ ಶುರುವಾಗಿ ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಬ್ಬಹರಿದಿನಗಳಲ್ಲಿ ದಾನಿಗಳು ಸಾಮಾನ್ಯವಾಗಿ ಶಾಲೆಗಳಿಗೆ, ಬಡಮಕ್ಕಳಿಗೆ ಉಳಿದ ಆಹಾರವನ್ನು ನೀಡುತ್ತಾರೆ. ಹೀಗೆ ಆಹಾರ ನೀಡುವವರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಹಾಗೆಯೇ ಆಹಾರ ತಯಾರಿಸುವವರು ಬೇಜವಾಬ್ದಾರಿ ತೋರಿ ಗುಣಮಟ್ಟದ ಆಹಾರ ತಯಾರಿಸದಿದ್ದಲ್ಲಿ ಇಂತಹ ದುರಂತಗಳು ಸಂಭವಿಸುತ್ತವೆ.

ಸಾಮೂಹಿಕವಾಗಿ ಆಹಾರ ವಿತರಿಸುವಾಗ ಆಯೋಜಕರು ಅಥವಾ ಒದಗಿಸುವವರು ಮುನ್ನಚ್ಚರಿಕೆಯಿಂದ ಅಡುಗೆಯ ಗುಣಮಟ್ಟವನ್ನು ಹರಿಶೀಲಿಸಿ ನಂತರ ಹಂಚಿಕೆ ಮಾಡಬೇಕಿದೆ.

-ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು.

 

Tags:
error: Content is protected !!