Mysore
20
overcast clouds
Light
Dark

ರಸ್ತೆ ಗುಂಡಿಗಳ ಸುತ್ತ ದೀಪ ಬೆಳಗಿಸಿ ಹಬ್ಬ ಆಚರಣೆ

ಮೈಸೂರು : ನಗರದ ಮಧ್ವಾಚಾರ್ಯ ರಸ್ತೆ ಬಳಿ ಗಾಡಿ ಚೌಕ ಗುಂಡಿಗಳ ಮಧ್ಯೆ ದೀಪಗಳನ್ನು ಬೆಳಗಿಸುವ ಮೂಲಕ ಕೃಷ್ಣರಾಜ ಯುವ ಬಳಗದ ವತಿಯಿಂದ ದೀಪಾವಳಿಯನ್ನು ಆಚರಿಸಲಾಯಿತು.

ನಗರದಲ್ಲಿ ಹಲವಾರು ರಸ್ತೆಗಳು ಗುಂಡಿಮಯವಾಗಿರುವ  ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ರಸ್ತೆ ಸರಿಪಡಿಸಲು ವಿಶೇಷವಾಗಿ ಗುಂಡಿಗಳ ಸುತ್ತ ದೀಪಗಳನ್ನು ಬೆಳಗಿಸುವ ಮೂಲಕ ಮೈಸೂರು ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನ ಸೆಳೆಯಲು ಮಹಾನಗರ ಪಾಲಿಕೆ ವಿರುದ್ಧ ಅಣಕು ಪ್ರದರ್ಶನ ಮಾಡುವ ಮೂಲಕ ಈ ಕೂಡಲೇ ಮೈಸೂರು ನಗರದ ಎಲ್ಲಾ ಗುಂಡಿಗಳನ್ನು ಮುಚ್ಚುವ ಕಾರ್ಯ ಮುಂದಾಗಬೇಕು ಎಂದು ಒತ್ತಾಯಿಸಿದರು.

ದಸರೆಯೊಳಗೆ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸಲಾಗುವುದು ಎಂದು ಉಸ್ತುವಾರಿ ಸಚಿವರು ಹಾಗೂ ಮಹಾಪೌರರು ಭರವಸೆ ನೀಡಿದರು ಆದರೆ ದಸರಾ ಮುಗಿದು 20ದಿನಗಳಾದರೂ ರಸ್ತೆ ದುರಸ್ತಿಗೊಳಿಸುತ್ತಿಲ್ಲವೇಕೆ ? ಎಂದು ಕಾಂಗ್ರೆಸ್ ಮುಖಂಡ ಪ್ರದೀಪ್ ಕುಮಾರ್ ಪ್ರಶ್ನಿಸಿದ್ದಾರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡನೀಯವಾದುದು. ಜನರಿಗೆ ಮೂಲ ಸೌಲಭ್ಯವನ್ನು ಕಲ್ಪಿಸದ್ದಿದ್ದರೆ ಇನ್ನೇನು ಮಾಡುವವರು ಎಂಬ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳು ಹಾಳಾಗಿ ಅಪಘಾತ ಹೆಚ್ಚು ಅನಾಹುತಗಳಿಗೆ ಗುಂಡಿಗಳೇ ಆಹ್ವಾನ ನೀಡುತ್ತಿದೆ, ಈ ಕುರಿತು ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ವರದಿಯಾಗಿದೆ. ವಾಹನಗಳು ಗುಂಡಿಗಳಲ್ಲಿ ಓಡಾಡಲು ತಪ್ಪಿಸಲು ಹೋಗಿ 28 ಜನ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರಿನಲ್ಲೂ ಸಹ ಹಲವಾರು ಅಪಘಾತಗಳು ಆಗಿದೆ ಇಂತಹ ಘಟನೆಗಳು ಮರುಕಳಿಸಬಾರದು. ಮರು ಕಲ್ಪಿಸಿದರೆ ಇದಕ್ಕೆ ಪೂರ್ಣ ನಗರಪಾಲಿಕೆ ಅಧಿಕಾರಿಗಳೇ ನೇರವಾಗಿ ಹೊಣೆಯಾಗುತ್ತಾರೆ. ಇದರ ಬದಲಾಗಿ ಇವರು ಗುಣಮಟ್ಟದ  ರಸ್ತೆಗಳನ್ನು ಮಾಡಲು ಮುಂದಾಗಬೇಕು ,ಈ ಕೂಡಲೇ ಮೈಸೂರು ನಗರದಲ್ಲಿರುವ ಎಲ್ಲಾ ಗುಂಡಿಗಳನ್ನು ಗುಣಮಟ್ಟವಾಗಿ ಮುಚ್ಚಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಪ್ರದೀಪ್ ಕುಮಾರ್ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಅಹಿಂದ ನಟರಾಜ್ ,ಕೃಷ್ಣರಾಜ ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ ,ಎಸ್ ಎನ್ ರಾಜೇಶ್ ,ತೀರ್ಥಕುಮಾರ್ ,ಹಾಗೂ ಇನ್ನಿತರರು ಹಾಜರಿದ್ದರು

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ