ಪಾಂಡವಪುರ: ಐದು ದಿನದ ನವಜಾತ ಗಂಡು ಶಿಶುವನ್ನು ಬುಟ್ಟಿಯಲ್ಲಿಟ್ಟು ಪೋಷಕರು ಪರಾರಿಯಾಗಿರುವ ಘಟನೆ ತಾಲ್ಲೂಕಿನ ಚಿಕ್ಕಮರಳಿ ಗ್ರಾಮದ ಬಳಿಯ ಲೋಕಪಾವನಿ ನದಿ ಬಳಿ ನಡೆದಿದೆ.
ಐದು ದಿನದ ಶಿಶುವನ್ನು ತಾಯಿಯು ಬುಟ್ಟಿಯಲ್ಲಿಟ್ಟು ಬಿಟ್ಟು ಹೋಗಿದ್ದಾಳೆ ಎಂದು ಹೇಳಲಾಗಿದೆ.
ಈ ವಿಚಾರ ಸಾರ್ವಜನಿಕರ ಗಮನಕ್ಕೆ ಬರುತ್ತಿದ್ದಂತೆ ಪಾಂಡವಪುರ ಪೊಲೀಸರು ಹಾಗೂ ಸಿಡಿಪಿಒ ನಟರಾಜು ಅವರು ರಕ್ಷಣೆ ಮಾಡಿ, ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಮಗುವು ಆರೋಗ್ಯವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.





