ಮೈಸೂರು : ನಿವೃತ್ತ ತಹಶೀಲ್ದಾರ್ ಕೆ ರಾಜುಗೋಪಾಲ್ ಅವರು ಇಂದು ನಿಧನರಾಗಿದ್ದಾರೆ.
ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಸರಸ್ವತಿಪುರಂ ನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಇವರು ಸರಸ್ವತಿ ನಿಲಯದ ನಿರ್ದೇಶಕರಾಗಿಯೂ ಕೂಡ ಕಾರ್ಯನಿರ್ವಹಿಸಿದ್ದರು.
ಮೃತರು ಮಗಳು ಅನುಸೂಯ, ಐಎಎಸ್ ಅಧಿಕಾರಿ ಕೆ ಆರ್ ರಾಮಕೃಷ್ಣ, ಸೊಸೆ ಡಾ. ಮೀರಾ ಮೂರ್ತಿ, ಸೇರಿದಂತೆ ಅನೇಕ ಬಂಧು ಬಾಂಧವರನ್ನು ಅಗಲಿದ್ದಾರೆ.