Mysore
19
overcast clouds
Light
Dark

ರಾಜಕೀಯದ ಆಳ ಅಗಲ ಅರಿತೆ ರಾಜಕಾರಣಕ್ಕೆ ಬಂದಿರುವುದು: ರಾಜವಂಶಸ್ಥ ಯದುವೀರ್‌

ಮೈಸೂರು: ರಾಜಕೀಯದ ಆಳ-ಅಗಲ ಅರಿತೇ ರಾಜಕಾರಣಕ್ಕೆ ಬಂದಿದ್ದೇನೆ. ಸಮಾಜದಲ್ಲಿ ಅಭಿವೃದ್ಧಿ ತರಬೇಕಾದರೇ ಅದಕ್ಕೆ ರಾಜಕಾರಣವೇ ಮಾರ್ಗವಾಗಿದೆ ಎಂದು ರಾಜವಂಶ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 1 ವರ್ಷದಿಂದ ರಾಜಕಾರಣದ ಬಗ್ಗೆ ನನಗೆ ಒಲವಿತ್ತು. ಅರಮನೆ ಜೊತೆಗೆ ರಾಜ್ಯ ಬಿಜೆಪಿ ಸದಾ ಸಂಪರ್ಕದಲ್ಲಿತ್ತು. ನನ್ನ ಸಿದ್ದಾಂತ ಮತ್ತು ಅಭಿವೃದ್ದಿ ದೃಷ್ಠಿಕೋನ ನೋಡಿದಾಗ ಬಿಜೆಪಿ ಸರಿಯಾದ ಪಕ್ಷ ಎಂದು ಭಾವಿಸಿ ಪಕ್ಷಕ್ಕೆ ಸೇರ್ಪಡೆಗೊಂಡೆ. ನಾನು ಯಾವುದೇ ಲಾಬಿಯಿಂದ ಬಿಜೆಪಿ ಟಿಕೆಟ್ ಪಡೆದಿಲ್ಲ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.