Mysore
20
overcast clouds
Light
Dark

ಸಾಹಿತಿ ಭೈರಪ್ಪ ಅವರನ್ನು ಭೇಟಿ ಮಾಡಿ, ತಮ್ಮನ್ನು ಬೆಂಬಲಿಸುವಂತೆ ಯದುವೀರ್‌ ಮನವಿ !

ಮೈಸೂರು : ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರನ್ನು ಮೈಸೂರು-ಕೊಡಗು ಲೋಕಸಭೆಯ ಬಿಜೆಪಿ ಅಭ್ಯರ್ಥಿ ಯದುವೀರ್‌ ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಚುನಾವಣೆಯಲ್ಲಿ ತಮಗೆ  ಬೆಂಬಲ ನೀಡುವಂತೆ ಮನವಿ ಮಾಡಿದರು.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಯದುವೀರ್‌ ಅವರು, ʼಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಎಸ್. ಎಲ್ ಭೈರಪ್ಪ ರವರನ್ನು ಮೈಸೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಯೋಗ-ಕ್ಷೇಮವನ್ನು ವಿಚಾರಿಸಲಾಯಿತು.

ಅವರೊಡನೆ, ಸಾಮಾಜಿಕವಾಗಿ ಹಾಗೂ ಸಾಹಿತ್ಯಾತ್ಮಕವಾಗಿ ಹಲವಾರು ವಿಚಾರಗಳನ್ನು ಚರ್ಚಿಸಲಾಯಿತು.ಇದೆ ವೇಳೆ  ಭೈರಪ್ಪನವರು ನಮಗೆ ಹಲವಾರು ಸಲಹೆಗಳನ್ನು ನೀಡಿದರುʼ ಎಂದು ತಿಳಿಸಿದ್ದಾರೆ.