Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ತಂದೆ ಎದುರೇ ಬಸ್ ಚಕ್ರಕ್ಕೆ ಸಿಲುಕಿ ಮಗನ ಸಾವು

ನಂಜನಗೂಡು ಬಸ್ ನಿಲ್ದಾಣದಲ್ಲಿ ದಾರುಣ ಘಟನೆ

ನಂಜನಗೂಡು: ತಂದೆ ಎದುರೇ ಮಗ ಬಸ್ ನಿಲ್ದಾಣದಲ್ಲಿ ಬಸ್ ಚಕ್ರಕ್ಕೆ ಸಿಲುಕಿ ಸಾವಿಗೀಡಾದ ದಾರುಣ ಘಟನೆ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.  ನಂಜನಪುರದ ಪ್ರಕಾಶ ಅವರ ಪುತ್ರ ಪ್ರಜ್ವಲ್ (೧೪) ಮೃತಪಟ್ಟ ಬಾಲಕ. ಊರಿಗೆ ತೆರಳಲು ನಗರದ ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ಈ ದುರಂತ ನಡೆದಿದೆ.

ತಂದೆ ಬಸ್ ಹತ್ತಿದ್ದು ಮಗ ಪ್ರಜ್ವಲ್ ಮುಂಬಾಗಿಲಿನಲ್ಲಿ ಹತ್ತಲು ಹೋದಾಗ ಹಿಂಬಂದಿಯಲ್ಲಿ ಹತ್ತು ಎಂಬ ಧ್ವನಿ ಕೇಳಿದ ಬಾಲಕ ಹಿಂದಿನ ಬಾಗಿಲಿನಲ್ಲಿ ಹತ್ತಲು ಹೊದಾಗ ಚಾಲನೆಗೊಂಡ ಬಸ್‌ನ ಹಿಂಬದಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಶವ ಸಾಗಿಸಲು ವಾಹನವೇ ಇಲ್ಲ: ಅಪಘಾತದಲ್ಲಿ ಸಿಲುಕಿದವರನ್ನು ಕೊಂಡೊಯ್ಯಲು  ಅನೇಕ 108 ಆಂಬ್ಯುಲೆನ್ಸ್ ವಾಹನಗಳಿರುವ ನಂಜನಗೂಡಲ್ಲಿ ಶವಸಾಗಿಸಲು ವಾಹನದ ಕೊರತೆ ಇದೆ. ಬಸ್ ನಿಲ್ದಾಣದಲ್ಲಿ ಸಾವಿಗೀಡಾದ ಬಾಲಕನ ಶವ ಸಾಗಿಸಲು ಯಾವುದೇ ವಾಹನ ಬಾರದಿದ್ದಾಗ ಸಂಚಾರ ಠಾಣೆ ಎಸ್‌ಐ ಯಾಸ್ಮಿನ್ ತಾಜ್, ಆಟೋ ಚಾಲಕ  ಪಾಷ ಆಗಮಿಸಿ ಮೃತದೇಹವನ್ನು ಸಾಗಿಸಿದರು.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ