ಮೈಸೂರು: ಶಾಂತರಾಜು ಎಂ ಅವರು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹಾ ಪ್ರಧ್ಯಾಪಕರಾದ ಡಾ. ಶೋಭಾ ವಿ ಅವರ ಮಾರ್ಗದರ್ಶನದಲ್ಲಿ “ಚಾಮರಾಜನಗರ ಜಿಲ್ಲೆಯ ಬೃಹತ್ ಶಿಲಾಯುಗ ಸಂಸ್ಕೃತಿ” ಎಂಬ ವಿಷಯದ ಬಗ್ಗೆ ಸಂಶೋಧನಾ ಮಹಾಪ್ರಬಂಧ ನಡೆಸಿದ್ದು, ಅದನ್ನು ಮೈಸೂರು ವಿಶ್ವವಿದ್ಯಾನಿಲಯವು ಅಂಗೀಕರಿಸಿದೆ.
ಶಾಂತರಾಜು ಎಂ ಅವರು ಮಹಾಪ್ರಬಂದವನ್ನು ಕನ್ನಡ ಭಾಷೆಯಲ್ಲಿ ಸಿದ್ಧಪಡಿಸಿದ್ದು, ಅವರು ಪಿಹೆಚ್.ಡಿ ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ (ಖುದ್ದಾಗಿ/ಗೈರುಹಾಜರಿಯಲ್ಲಿ) ಪಡೆಯಬಹುದಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ(ಪರೀಕ್ಷಾಂಗ)ರಾದ ಪ್ರೊ.ಎನ್ ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.